Tuesday 3 September 2013

ಮಡಿವಂತಿಕೆ ಇಲ್ಲದ ಶ್ರೀ ಗಣೇಶ



                                                                                                 ಎಂ. ಗಣಪತಿ. ಕಾನುಗೋಡು

ಕಿ.ಶ. 2ನೇ ಶತಮಾನದಿಂದ  ಗಣೇಶನ ಪೂಜೆಯು ರೂಡಿಗೆ ಬಂದಿತೆಂದು ಹೇಳಲಾಗುತ್ತಿದೆ. ಕಿ.ಶ. 8ನೇ ಶತಮಾನದಿಂದ ಈಚೆಗೆ   ಈಗಿನಂತೆ  ಎಲ್ಲಾ ಕಾರ್ಯಗಳ ಪ್ರಾರಂಭದಲ್ಲಿ ಗಣಪತಿಯನ್ನು  ಪೂಜಿಸುವ ಸಂಪ್ರದಾಯ ಬಂದಿತೆಂದು ಹೇಳುತ್ತಾರೆ. 
ಗಣೇಶನ ಹಬ್ಬದ ಕ್ರಮದಲ್ಲಿ  ಎರಡು ನೆಲೆಗಳಿವೆ,   ಒಂದು,  ಕುಟುಂಬದ ವ್ರತವಾಗಿ ಜನರು ಅವರವರ ಮನೆಯಲ್ಲಿ ಅಚರಿಸುವುದು.  ಇನ್ನೊಂದು  ಸಂಘಸಂಸ್ಥೆಗಳು, ಶಾಲೆಗಳು, ಸರ್ಕಾರಿ ಕಛೇರಿಗಳು ಅದಕ್ಕಾಗಿ ಹುಟ್ಟಿಕೊಂಡ ಸಮಿತಿಗಳಿಂದ ಸಾರ್ವಜನಿಕವಾಗಿ  ಉತ್ಸವವಾಗಿ ಆಚರಿಸುವುದು.  
ಗಣಪತಿಯ ಹುಟ್ಟಿನ  ಬಗ್ಗೆ  ಎರಡು ಅಬಿsಪ್ರಾಯಗಳಿವೆ. ದೇವತೆಗಳೆಲ್ಲಾ  ಸೇರಿ ತಮ್ಮ ಕಾರ್ಯ ನಿರ್ವಿಘ್ನವಾಗಿ ನೆರವೇರುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು   ಶಿವನನ್ನು ಪ್ರಾರ್ಥಿಸಿದರು. ಆಗ ಅವರ ಇಷ್ಟದಂತೆ  ಪಾರ್ವತಿಯಲ್ಲಿ ಗಣೇಶನು ಹುಟ್ಟುವಂತೆ  ಶಿವ ಅನುಗ್ರಹಿಸಿದ. ಹೀಗೆ ಹುಟ್ಟಿದ ಗಣೇಶನಿಗೆ ಗಣಾದಿಪಥ್ಯವನ್ನು  ಕೊಟ್ಟು ಕಾರ್ಯವನ್ನು ನಿರ್ವಿಘ್ನವಾಗಿ  ನೆರವೇರಿಸಿಕೊಡುವ  ಶಕ್ತಿಯನ್ನು  ಕೊಟ್ಟ. ಅವನು  ಹೀಗೆ ಹುಟ್ಟಿದ್ದು ಭಾದ್ರಪದ ಶುಕ್ಲ ಚತುರ್ಥಿಯ ದಿನ ಚಂದ್ರೋದಯಕಾಲ. ಈ ಕಾರಣಕ್ಕಾಗಿ  ಆಂದಿನ  ದಿನ  ಗಣಪತಿಯ  ವ್ರತವನ್ನು  ನಡೆಸುವಂತೆ  ಶಿವ  ಅನುಗ್ರಹಿಸಿದ ಎನ್ನುವುದು ಒಂದು ಅಬಿsಪ್ರಾಯ. 
ಪಾರ್ವತಿಯು ತನಗಾಗಿ  ತನ್ನ ಅಂಗರಾಗದಿಂದ  ಗಣೇಶನನ್ನು ಸೃಷ್ಠಿಸಿ  ಅವನಿಗೆ ಜೀವಕಳೆಯನ್ನು ಕೊಟ್ಟಳು.  ಅವನು ಜೀವಪಡೆದ ಕೆಲವೇ ಸಮಯದಲ್ಲಿ  ಶಿವನಿಂದ ಶಿರಚ್ಛೇದನಕ್ಕೆ ಗುರಿಯಾದ. ಪುನಃ ಪಾರ್ವತಿಯ ಪ್ರಾರ್ಥನೆಯಂತೆ  ಆನೆಯ ತಲೆಯನ್ನು ಹೊಂದಿದವನಾಗಿ  ತಂದೆಯಿಂದ  ಜೀವಪಡೆದ. ಪಾರ್ವತಿಗೆ ತಾನು ಸೃಷ್ಠಿಸಿದ ಮಗನಮೇಲೆ ಬಹಳ  ಪ್ರೇಮ. ಹುಟ್ಟಿದ ಕೂಡಲೇ ಕಷ್ಟವನ್ನು ಅನುಭವಿಸಿದಕ್ಕಾಗಿ ಎಲ್ಲರೂ ನಿನ್ನನೇ ಮೊದಲು ಪೂಜಿಸಬೇಕು  ಎಂದು    ಆಶೀರ್ವದಿಸಿದಳು. ಅದಕ್ಕೆ ಶಿವನೂ  ಅನುಗ್ರಹಿಸಿದ ಎನ್ನುವುದು ಇನ್ನೊಂದು   ಅಬಿಪ್ರಾಯ.  
ಗಣೇಶನ ಶಾಪಕ್ಕೆ  ಗುರಿಯಾದ  ಚಂದ್ರ ತನ್ನ ಶಾಪ ವಿಮೋಚನೆಗಾಗಿ ಅವನನ್ನೇ ಮೊರೆಹೊಕ್ಕ. ಭಾದ್ರಪ್ರದ ಶುದ್ಧ ಚತುರ್ಥಿಯ ದಿನ ತನ್ನ ವ್ರತವನ್ನು ಕೈ ಗೊಂಡವರಿಗೆ   `ಅಪವಾದ` ಶಾಂತಿಯಾಗಲೆಂದು ಗಣಪತಿಯು ಚಂದ್ರನಿಗೆ ಅನುಗ್ರಹಿಸಿದ. ಒಮ್ಮೆ  ಶ್ರೀ ಕೃಷ್ಣ  ಶಮಂತಕ  ಮಣಿಯನ್ನು ಕದ್ದನೆಂಬ ಅಪವಾದಕ್ಕೆ ಸಿಲುಕಿದ.  ಆಗ ಇದರಂತೆ ಗಣಪತಿಯ ವ್ರತವನ್ನು ಕೈಗೊಂಡು ಆ ಶಾಪವನ್ನು ಪರಿಹರಿಸಿಕಕೊoಡ ಎಂದು ಹೇಳಲಾಗಿದೆ. 
ಮೇಲಿನ ಎಲ್ಲಾ ವಿಚಾರಗಳು ಜನರು ವೈಯಕ್ತಿಕವಾಗಿ ಗಣೇಶನ ಪೂಜೆ ಅಥವಾ ವ್ರತವನ್ನು ನಡೆಸುವುದಕ್ಕೆ ಪೂರಕವಾದ ಅಂಶಗಳು .
ಇನ್ನು,   ಸಾರ್ವತ್ರಿಕವಾಗಿ ಗಣೇಶನ  ಉತ್ಸವವನ್ನು ನಡೆಸುವ ವಿಚಾರ.  ಹಲವು ಜಾತಿಗಳು, ಸಂಪ್ರದಾಯಗಳು, ಸುಮಾರು  ಆರು ನೂರು ರಾಜ ಸಂಸ್ಥಾನಗಳ ಶಿಷ್ಟತೆಯಿಂದ ಕೂಡಿದ ಭಾರತ ರಾಷ್ಟ್ರದಲ್ಲಿ ಭಾವೈಕ್ಯತೆಯನ್ನು ತರುವುದು ಹಿಂದೆ ಒಂದು ಕಾಲದ ರಾಷ್ಟ್ರ ನೇತಾರರ ಉದ್ದೇಶವಾಗಿತ್ತು.  ಈ  ಉದ್ದೇಶ ಸಾಧನೆಗಾಗಿ ಸನ್ಮಾನ್ಯ ಬಾಲಗಂಗಾಧರ ತಿಲಕರು ಪ್ರಥಮವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಣೆಗೆ  ತಂದರು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹವನ್ನು ಇಟ್ಟು ವಾರಗಟ್ಟಲೆ   ಉತ್ಸವವನ್ನು ನಡೆಸುವ  ಪದ್ಧತಿ ಅಂದಿನಿಂದ ರೂಡಿsಗೆ ಬಂದಿತು. ಎಲ್ಲಾ ಜಾತಿಗಳ, ವರ್ಗಗಳ, ಸಂಪ್ರದಾಯಗಳ ಜನರು ಗಣೇಶÉೂೀತ್ಸವದ ಸಂಭ್ರಮದಲ್ಲಿ  ಮಿಲನಗೊಳ್ಳುವಂತಾಯಿತು. ಇಲ್ಲಿ ಶ್ರೀ ಗಣೇಶ  ಜಾತ್ಯತೀತ , ಮಡಿವಂತಿಕೆ ಇಲ್ಲದ ದೇವರು. 
ಆದರೆ  ದುರಂತದ ಸಂಗತಿಯೆಂದರೆ ಇತ್ತೀಚೆಗೆ ಸಾರ್ವಜನಿಕ ಗಣೇಶೋತ್ಸವ  ತನ್ನ ಮೂಲ ಉದ್ದೇಶದ ಪಾವಿತ್ರತೆಯನ್ನು  ಕಳೆದುಕೊಳ್ಳುತ್ತಿದೆ. ಕ್ರಿಕೆಟ್ ಟೂರ್ನ್‍ಮೆಂಟ್ ಮಟ್ಟಕ್ಕೆ  ಅದು ಕುಸಿದಿದೆ. ಒಂದೊಂದು  ಜಾತಿಯವರದ್ದೇ ಒಂದೊಂದು  ಸಾರ್ವಜನಿಕ ಗಣೇಶ, ಒಂದು ಗುಂಪಿನವರದ್ದರ  ವಿರುದ್ಧ ದುರುದ್ದೇಶವಾಗಿ ಇನ್ನೊಂದು  ಸಾರ್ವಜನಿಕ ಗಣೇಶ.  ಈ  ತೆರೆನ ಬೆಳವಣಿಗೆ  ಸಮಾಜದ  ಸಂಘಟನೆಗೆ , ರಾಷ್ಟ್ರೀಯ ಭಾವೈಕ್ಯತೆಗೆ  ಮಾರಕವಾಗುತ್ತಿದೆ. ಕೆಲವರು ಹಣಮಾಡುವುದು, ಕೇವಲ ಅಮಲಿನ ರಂಜನೆಯ ಉದ್ದೇಶಕ್ಕಾಗಿಯೇ  ಗಣೇಶೋತ್ಸವವನ್ನು  ನಡೆಸುತ್ತಿರುವುದು  ಅಲ್ಲಲ್ಲಿ ಕಂಡುಬರುತ್ತಿದೆ. 

ಎಂ. ಗಣಪತಿ ಕಾನುಗೋಡು
ಅಂಚೆ : ಬಿ. ಮಂಚಾಲೆ - 577 431
ತಾಲ್ಲೂಕು, ಸಾಗರ, ಜಿಲ್ಲೆ ಶಿವಮೊಗ್ಗ
ಮೊಬ :9481968771
BLOG: mgkangod.blogspot.com

Monday 2 September 2013

ಪುರುಸೊತ್ತಿಲ್ಲ . ಆಧುನಿಕ ಜಗತ್ತಿನಲ್ಲಿ ಒಂದು ಆತಂಕ


                                                                                                    ಎಂ.ಗಣಪತಿ. ಕಾನುಗೋಡು

ಪುರುಸಸೊತ್ತಿಲ್ಲ _ ಎನ್ನುವ ಪರಿಕಲ್ಪನೆ ಒಬ್ಬ ದೊಡ್ಡ ಉದ್ಯಮಿಯಿಂದ ಹಿಡಿದು ಬಿಕ್ಷುಕನವರೆಗು ತನ್ನ ಹರವಾನ್ನು  ಕಂಡುಕಕೊಂಡಿದೆ . ಇಂದು ಯಾರನ್ನು ಕೇಳಿದರೂ ಪುರುಸೊತ್ತಿಲ್ಲ ಎನ್ನುವ ಸೊಲ್ಲು ಸಾಮಾನ್ಯ. 
ಆಧುನಿಕ ಯಾಂತ್ರಿಕ  ಬದುಕಿನಲ್ಲಿ ಇದು ಅನಿರೀಕ್ಷಿ  ತವೇನಲ್ಲ. ಆದರೆ  ಪುರುಸೊತ್ತು ಎನ್ನುವುದು  ತಾನಾಗಿಯೇ  ಸಿಗುವಂತವುದೇ ಅಥವಾ ನಾವು ಕಂಡುಕೊಳ್ಳಬೇಕಾದುದ್ದೇ ಎಂಬುದನ್ನು ನಾವೇ ಆಲೋಚಿಸಬೇಕು. 
 ಒಂದು ನಿರ್ದಿಷ್ಟ ಉದ್ಯೋಗದ ಜನರಿಗೆ _ ಕೃಷಿಕ, ನೌಕರ, ವ್ಯಾಪಾರಿ ಹೀಗೆ  ಯಾವುದೇ ಒಂದು ಕಸುಬಿನಲ್ಲಿ  ನಿರಂತರ ನಿರತರಾಗಿರುವವರಿಗೆ   ಬಿಡುವು ಇರುವುದಿಲ್ಲ.  ಹಾಗೆಂದು  ಅವರು ತಮ್ಮ ದೈನಂದಿನ  ಮೂಲಭೂತ ಅಗತ್ಯಗಳು  _ ಊಟ, ಸ್ನಾನ, ನಿದ್ರೆ ಹೀಗೆ ಮುಂತಾದವುಗಳನ್ನು ಬಿಡಲು ಸಾಧ್ಯವಿಲ್ಲ. ಅದಕ್ಕೆಲ್ಲ ದಿನನಿತ್ಯದ ಕಸುಬಿನಲ್ಲಿ ಎಷ್ಟೇ ಒತ್ತಡವಿದ್ದರೂ ಪುರುಸೊತ್ತನ್ನು ಕಂಡುಕೊಳ್ಳೂತ್ತಾರೆ . ಅದು ಸಹಜ  ಕೂಡ. ಇವರಿಗೆ ತಾವಾಯ್ತು , ತಮ್ಮ ಕೆಲಸವಾಯ್ತು ಅಷ್ಟೇ . ಇದು ಒಂದು ವರ್ಗ. 
ಇನ್ನೊಂದು ವರ್ಗದ ಜನರಿದ್ದಾರೆ.  ಇವರಿಗೆ ಯಾವುದೇ ನಿರ್ದಿಷ್ಟ ಉದ್ಯೋಗ ಇರುವುದಿಲ್ಲವೆಂದಲ್ಲ.  ಅದನ್ನೇ ಹಿಡಿದು  ಮುನ್ನೆಡೆಸುವ ಪದ್ದತಿ ಇರುವುದಿಲ್ಲ. ಹಾಗೂ ಹೀಗೂ  ಮೂರುಹೊತ್ತಿನ ಅನ್ನಕ್ಕೆ ಬೇಕಾಗುವಷ್ಟು ದುಡಿಮೆ ಅವರದ್ದು. ಹಾಗೆಂದು ಅವರಿಗೂ ಪುರುಸೋತ್ತಿಲ್ಲ .  ತಮ್ಮ ಮಿತ ದುಡಿಮೆಯ ಶೂನ್ಯವೇಳೆಯಲ್ಲಿ ಅವರು ತಮ್ಮದರಕ್ಕಿಂತ   ಬೇರೆಯವರ ಬಗ್ಗೆ  ಕಾಳಜಿ ವಹಿಸುವುದು ಹೆಚ್ಚು. ತಮ್ಮ ಸುತ್ತಮುತ್ತಲಿನವರ  ಉಸಾಬರಿಗೆ ಅನಾವಶ್ಯಕ  ಮೂಗು ತೂರಿಸುತ್ತಾರೆ. ಪರಪೀಡನೆಯಿದ ಮನೋರಂಜನೆಯನ್ನು ಪಡೆಯುತ್ತಾರೆ. ಇವರು ಒಬ್ಬರಿಗೊಬ್ಬರಿಗೆ ಬೆಂಕಿಹಚ್ಚಿ ಕೊನೆಗೆ ತಾವೇ ಪಂಚಾಯಿತಿ ಮಾಡಿ  ಬಾಸ್ ಆಗುವ  ಚಟದ ಜನ.  ತನ್ನದು ಸಾವಿರ ಹೋದರೂ ಮತ್ತೊಬ್ಬನ ನೂರನ್ನು ವೆಚ್ಚಮಾಡಿಸುತ್ತೇನೆ ಎನ್ನುವ ಜನ. ಆಯುಷ್ಯವಿಡೀ  ಕೋರ್ಟು _ಕಟ್ಲೆ ನಡೆಸುವ ಜನ  ಹೀಗೆ  ಇನ್ನು ಅನೇಕ  ಸಲ್ಲದ ಕೆಲಸಗಳಲ್ಲಿಯೇ   ದಿನದ ತಮ್ಮ ವೇಳೆಯನ್ನು ವ್ಯಯಮಾಡುವ ಜನರಿದ್ದಾರೆ. ಇವರು ತಮ್ಮ ಸೀಮಿತ ಉದ್ಯೋಗಕ್ಕೆ ಧಕ್ಕೆ ತಂದುಕೊಳ್ಳದೆ ಸ್ವಂತ ರಂಜನೆಗಾಗಿ ಇನ್ನೊಬ್ಬರಿಗೆ ತೊಂದರೆಯನ್ನು ಕೊಡುವುದರಲ್ಲಿ ತಮ್ಮ ಜೀವಿತಾವದಿsಯನ್ನು  ತೊಡಗಿಸಿಕೊ0ಡಿರುತ್ತಾರೆ,  ಇವರಿಗೂ ಪುರುಸೊತ್ತೇ  ಇಲ್ಲ. 
ಹಲವು ಜನರಿಗೆ  ತಮ್ಮ ಜೀವನೋಪಾಯಕ್ಕಾಗಿ ಯಾವ ಉದ್ಯೋಗವೂ ಇರುವುದಿಲ್ಲ. ಸ್ವಂತ ದುಡಿಯುವುದಕ್ಕಷ್ಟೇ ಸೋಮಾರಿಗಳು. ಸ್ವಾಬಿಮಾನ ವಿಲ್ಲದವರು.  ಕುಟುಂಬದಲ್ಲಿ ಯಾರಾದರೂ ದುಡಿಯುವರಿದ್ದರೆ ತಿಂದುಕೊಂಡು ಅಡ್ಡನಾಡಿಯಾದವರು. ಹಾಗಂತ ಇವರಿಗೂ ಪುರುಸೊತ್ತಿಲ್ಲ.  ಇವರು ದಿನದ ಹೆಚ್ಚಿನ ಸಮಯ ಮಲಗಿರುತ್ತಾರೆ. ನಿದ್ದೆ ಬಂದಿಲ್ಲವೇ, ಹಾಯಾಗಿ ಕುಳಿತಿರುತ್ತಾರೆ.  ಎದ್ದುಹೊರಟರೋ, ಯಾರಿಗಾದರೂ   ಟೋಪಿಹಾಕಿ ಹಣ ಲಪಟಾಯಿಸುತ್ತಾರೆ.  ಇವರು ಸೋಮಾರಿಗಳೇ ವಿನಃ ದಡ್ಡರಲ್ಲ. ವಿಕೃತ ಮತ್ತು ಕ್ರಿಮಿನಲ್ ಮನೋಭಾವದವರು. ವಾಸ್ತವಿಕ ದುಡಿಮೆಗಾರರ ಮನಸ್ಸು  ಒಂದೇ ದಿಕ್ಕಿನಲ್ಲಿ , ಒಂದೇ ರೀತಿಯಲ್ಲಿ   ಓಡುತ್ತದೆ  ಇವರದ್ದು ಹಾಗಲ್ಲ. ಯಾರನ್ನಾದರೂ ವಂಚಿಸಿ ಹೊಟ್ಟೆ ತುಂಬಿಸಿಕೊಂಡು  ಮೋಜುಮಾಡಲು ಹಲವು ಕಡೆ, ಹಲವು ರೀತಿಯಲ್ಲಿ ಬುದ್ಧಿಯನ್ನು ವ್ಯಯಿಸುತ್ತಾರೆ. ಉಂಡಾಡಿಗಳಾಗಿ ತಿರುಗುತ್ತಾರೆ.ಕೆಲವೋಮ್ಮೆ ರೌಡಿಸಂನ್ನು ನಡೆಸುತ್ತಾರೆ.  ಸಮಾಜ ಕಂಟಕರಾಗಿ  ಬದುಕು ನಡೆಸುತ್ತಾರೆ. 
ಒಟ್ಟಾರೆ  ಎಲ್ಲರ ಬದುಕು ಪುರಸೊತ್ತು ರಹಿತವಾದದ್ದು.  ಸಮಯವನ್ನು ವಿನಿಯೋಗಿಸಿಕೊಳ್ಳುವ ಕ್ರಮಗಳು ಬೇರೆ ಬೇರೆ ಅಷ್ಟೆ. ನಾವು ಜೀವನದ ಸೀಮಿತ  ಕಾಲಾವದಿಯನ್ನು   ಸರಿಯಾಗಿ ವಿನಿಯೋಗಿಸಿಕೊಳ್ಳುವುದು ಮುಖ್ಯ. ಜೀವನವನ್ನು  ಶಿಸ್ತುಬದ್ದವಾಗಿ  ಹೊಂದಿಸಿಕೊಳ್ಳುವವರು ಪುರುಸೊತ್ತಿಗೂ ವೇಳೆಯನ್ನು ಹೊನ್ದಿಸಿಕೊಂಡಿರುತ್ತಾರೆ.  ಎಲ್ಲದಕ್ಕೂ ಘನ ಷರತ್ತು ಬೇಕು ಅಷ್ಟೆ.