Wednesday 26 November 2014

ಬಾ ಲ ಗ್ರ ಹ

 ಪ್ರಸ್ತುತಿ : ಎಂ. ಗಣಪತಿ ಕಾನುಗೋಡು.
ಬಾಲಗ್ರಹವೂ ಒಂದು ವಿಧದ ಮೂರ್ಛೆರೋಗ. ಇದಕ್ಕೆ ಇಂಗ್ಲಿಷ್ ನಲ್ಲಿ Febrile convulsion ಎನ್ನುತ್ತಾರೆ. ಇದು ಆರು ತಿಂಗಳಿನಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣುವ ಮೂರ್ಛೆ. ಮಕ್ಕಳಿಗೆ ಆಗಲಿ ಅಥವ ದೊಡ್ಡವರಿಗೆ ಆಗಲಿ ಈ ರೋಗವು ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ವ್ಯತ್ಯಾಸದಿಂದ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ಕಾಣಿಸಿಕೊಳ್ಳುತ್ತದೆ. ಈ ದೋಷದಿಂದ ಮೆದುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯುಂಟಾಗಿ ಮೂರ್ಛೆ ಬರುತ್ತದೆ.
ಬಾಲಗ್ರಹ ಇರುವ ಮಕ್ಕಳಲ್ಲಿ ಜ್ವರ ಬಂದಾಗ ಮಾತ್ರ ಮೂರ್ಛೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಐದು, ಆರು ವರ್ಷಗಳ ನಂತರ ಇಂಥಹ ಮಕ್ಕಳಲ್ಲಿ ಈ ಕಾಯಿಲೆ ನಿಂತು ಹೋಗುತ್ತದೆ. ಜ್ವರ ಬಂದಾಗ ಸೂಕ್ತ ಆರೈಕೆ ಮಾಡುವುದರಿಂದ ಇಂಥಹ ಬಾಲಗ್ರಹ ಬಾಧೆಯನ್ನು ತಪ್ಪಿಸಬಹುದು.
ಬಾಲಗ್ರಹದ ಬಾಧೆ ಸಾಮಾನ್ಯ ಮಟ್ಟದಲ್ಲಿ ಇರುವ ಮಕ್ಕಳಿಗೆ ಸಾಂದರ್ಭಿಕ ಔಷಧ ಸೇವನೆ ಸಾಕು. ಸತತವಾದ ಔಷಧ ಸೇವನೆಯ ಅಗತ್ಯವಿರುವುದಿಲ್ಲ. ಆದರೆ ಕೆಲವು ಮಕ್ಕಳಿಗೆ ಈ ತೊಂದರೆ ತೀವ್ರ ಪ್ರಮಾಣದಲ್ಲಿ ಇರುತ್ತದೆ. ಇಂಥಹ ತೀವ್ರ ಪ್ರಮಾಣದ ಬಾಲಗ್ರಹಕ್ಕೆ ಇಂಗ್ಲಿಷ್ ನಲ್ಲಿ Complex febrile seizures ಎನ್ನುತ್ತಾರೆ. ಇಂಥಹ ರೋಗಪೀಡಿತ ಮಕ್ಕಳಿಗೆ ಮಾತ್ರ ಸತತವಾಗಿ ಎರಡು ವರ್ಷ ಔಷಧದ ಸೇವನೆಯು ಅಗತ್ಯವಾಗಿರುತ್ತದೆ. ಯಾವುದಕ್ಕೂ ಇಂಥಹ ರೋಗಬಾಧಿತ ಮಗುವನ್ನು ಕೂಡಲೆ ನರರೋಗತಜ್ಞರಿಂದ ತಪಾಸಣೆಗೊಳಿಸಬೇಕು.
ಮೂರ್ಛೆ ಬಂದಾಗ ಮಗುವಿನ ಪೋಷಕರು ಗಾಬರಿಗೊಳ್ಳದೆ ಶಾಂತಿಯಿಂದ ಇರಬೇಕು. ಇದು ಮಾರಕ ರೋಗವಲ್ಲ ಎನ್ನುವುದನ್ನು ಅರಿತಿರಬೇಕು. ಮೂರ್ಛೆ ಬಂದ ಕೂಡಲೆ ಮಗುವನ್ನು ಮಗ್ಗುಲಾಗಿ ಮಲಗಿಸಬೇಕು. ಅದು ಧರಿಸಿದ ಬಟ್ಟೆಯನ್ನು ಸಡಿಲಗೊಳಿಸಬೇಕು. ಅದಕ್ಕೆ ಚೆನ್ನಾಗಿ ಗಾಳಿ, ಬೆಳಕು ಸಿಗುವಂತೆ ನೋಡಿಕೊಳ್ಳಬೇಕು. ಅಂಥಹ ಸಂದರ್ಭದಲ್ಲಿ ಮಗುವಿನ ಶರೀರವನ್ನು ಬಾಗಿಸುವುದಾಗಲಿ, ಅದರ ಒದ್ದಾಟದ ಚಲನೆಯನ್ನು ಬಲಾತ್ಕಾರವಾಗಿ ನಿಲ್ಲಿಸುವುದಾಗಲಿ ಮಾಡಕೂಡದು. ಅದು ಹಲ್ಲು ಕಚ್ಚಿಹಿಡಿಯಬಾರದೆಂದು ಅಥವ ನಾಲಿಗೆ ಕಚ್ಚಬಾರದೆಂದು ಬಾಯಿಗೆ ಚಮಚವನ್ನೋ, ಇನ್ನಾವುದೋ ವಸ್ತುವನ್ನು ಬಾಯೊಳಗೆ ಅಡ್ಡ ಇಡಬಾರದು. ಅಂಥಹ ಸಂದರ್ಭದಲ್ಲಿ ಮಗುವಿನ ಹತ್ತಿರ ಅಪಾಯಕಾರಿ ವಸ್ತುಗಳನ್ನು ಇಡಬಾರದು. ಮಗುವಿಗೆ ಪೂರ್ಣ ಪ್ರಜ್ಞೆ ಬರುವ ತನಕ ಕುಡಿಯಲು ಅಥವ ತಿನ್ನಲು ಏನನ್ನೂ ಕೊಡಬಾರದು. ಮೂರ್ಛೆ ಬಂದಾಗ ಮುಖದ ಎದುರಿಗೆ ಚಿಟಿಕೆ ಹಾಕುವುದು, ಕೈಗೆ ಕಬ್ಬಿಣ ಹಿಡಿಸುವುದು, ಈರುಳ್ಳಿ ಅಥವ ಚಪ್ಪಲಿಯನ್ನು ಮಗುವಿನ ಮೂಗಿಗೆ ಹಿಡಿದು ಮೂಸಿಸುವ ಪ್ರಯತ್ನ ಮಾಡುವುದು ಇತ್ಯಾದಿ ಕ್ರಿಯೆಗಳಿಂದ ಮಗು ಎಚ್ಚರಗೊಳ್ಳುತ್ತದೆ ಎಂಬುದು ಮೂಢನಂಬಿಕೆಯೇ ವಿನಃ ವೈಜ್ಞಾನಿಕ ಆಧಾರಿತವಲ್ಲ.
ತಾರೀಖು : 26 - 11 - 2014
ಮಾಹಿತಿಯ ಕೃಪೆ : ಡಾ|| ಎ .ಶಿವರಾಮಕೃಷ್ಣ .ನರರೋಗತಜ್ಞರು. ಶಿವಮೊಗ್ಗ. [ಅವರ " ಮೆದುಳಿನ ಕಾಯಿಲೆಗಳು " -- ಪುಸ್ತಕದಿಂದ ].

ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು

ಇಂದಿನ ತೀವ್ರಗಾಮಿ ಚಲನೆಯ ಸಮಾಜದಲ್ಲಿ ಯುವತಿಯರು ಯುವಕರಿಗೆ ಸರಿಸಮನಾಗಿ ವಿದ್ಯಾರ್ಹತೆ, ಸ್ವಂತ ದುಡಿದು ಹಣ ಗಳಿಸಬೇಕೆನ್ನುವ ಹಪಾಹಪಿ, ಗಂಡಿನ ಆಧಾರವಿಲ್ಲದೆ ಒಬ್ಬಂಟಿಯಾಗಿ ಮುನ್ನುಗ್ಗುವ ದಾಷ್ಟ್ಯ ...... ಈ ಎಲ್ಲವನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಭಾಗದ ಯುವತಿಯರಿಗೆ ಜೀವನೋಪಾಯಕ್ಕಾಗಿ ಹಿಂದಿನಂತೆ ಪುರುಷನನ್ನು ಅವಲಂಬಿಸುವ ಅಗತ್ಯವಿಲ್ಲ. ಇದಕ್ಕೆಲ್ಲ ಕಾರಣ ಅವರು ಹೊಂದಿರುವ ಆರ್ಥಿಕ ಸ್ವಾವಲಂಬನೆ.
ಇಲ್ಲಿ ಒಂದು ಪ್ರಶ್ನೆ ಇದೆ. ಪುರುಷನಿಗೆ ಆಗಲಿ ಮಹಿಳೆಗೆ ಆಗಲಿ, ಹಣವೊಂದೇ ಜೀವನದ ಏಕಮೇವ ಪೂರೈಕೆಯೇ? ಅಲ್ಲ. ಬದುಕಿನ ಅನೇಕ " ಬೇಕು " ಗಳಲ್ಲಿ ಹಣವು ಒಂದು ಅಷ್ಟೆ. ಆದರೆ ಹಣವೊಂದರಿಂದಲೇ ಬದುಕಿನ ಎಲ್ಲ ಬಯಕೆಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯನ ಅನೇಕ " ಬೇಕು " [ Wants ] ಗಳಲ್ಲಿ ಒಂದು ಹೆಣ್ಣಿಗೆ ಒಂದು ಗಂಡು, ಒಂದು ಗಂಡಿಗೆ ಒಂದು ಹೆಣ್ಣು ಬೇಕು ಎನ್ನುವುದು ಪ್ರಮುಖ. ಈ 'ಬೇಕು' ಅನೇಕ ಕಾರಣಗಳಿಂದ ಒಂದು ಅಗತ್ಯ. ಇದರಿಂದಾಗಿಯೇ ' ವಿವಾಹದ ಪರಿಕಲ್ಪನೆ ' ಹುಟ್ಟಿಕೊಂಡಿದ್ದು.
ಇವತ್ತಿನ ದುಡಿಮೆಯ ಸುಪತ್ತಿಗೆಯಲ್ಲಿ ಆ ಕ್ಸೇತ್ರದಲ್ಲಿರುವ ಎಲ್ಲ ಯುವಜನರಿಗೂ ಹಣದ ಜಲದ ಬುಗ್ಗೆ [ Foutain ] ಅವರ ಅಂಗೈಯಲ್ಲೇ ಇದೆ. ಈ ಅಮಲಿನಲ್ಲಿ ದಾಂಪತ್ಯದ ಬಾಂಧವ್ಯ ಬಹುತೇಕ ಯುವಜನರಲ್ಲಿ ಶಿಥಿಲವಾಗುತ್ತಿದೆ. ಯಾರಿಗೆ ಯಾರೂ ಕೇರ್ ಮಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ತನ್ನ ಹೊಟ್ಟೆಗೆ ಯಾರೂ ಏನು ದುಡಿದು ಹಾಕುವ ಅನಿವಾರ್ಯತೆ ಇಲ್ಲ. ಹಣದ ಎದುರು ಬದುಕಿನ ಉಳಿದ ಎಲ್ಲಾ 'ಬೇಕು 'ಗಳು ಅವರಿಗೆ ಈಗ ಗೋಚರಿಸುವುದಿಲ್ಲ.
ಇದರ ಪರಿಣಾಮ ವಿಚ್ಚೇದನ . ನಂತರ ತನ್ನ ಮಾತನ್ನೇ ಕೇಳುವಂಥಹ ಸಂಗಾತಿಗಾಗಿ ಶೋಧನೆ, ಅಂಥಹವರು ಸಿಕ್ಕಿದರೆ ತನ್ನ ಕರಾರುಗಳನ್ನು ಮುಂಚೆಯೇ ಮಂಡಿಸಿ ಅದು ಓ. ಕೆ . ಆದರೆ ನಂತರ ಮದುವೆ. ಆ ಮದುವೆಯಿಂದಾದ ದಾಂಪತ್ಯವೂ ಸಾಪ್ರದಾಯಿಕವಾದುದಲ್ಲ. ಅದು " Get together " ಮಾದರಿ. ಇದೇ ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು.
ಒಮ್ಮೆ ವಿಚ್ಚೇದನವಾಗದಿದ್ದರೂ ಬಹು ದಂಪತಿಗಳಲ್ಲಿ ಸಾಮರಸ್ಯವಿರುವುದಿಲ್ಲ. ಅದು ಶಿಥಿಲ ದಾಂಪತ್ಯ. ಪರಸ್ಪರ ಭಿನ್ನಾಭಿಪ್ರಾಯ, ಬದ್ಧತೆಯ ಕೊರತೆ, ಯಾರಿಗೆ ಯಾರೂ ಸೋಲುವುದಿಲ್ಲ. ಪರಸ್ಪರರ ಮೇಲೆ ಮಕ್ಕಳನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುವುದು, ಮಕ್ಕಳಲ್ಲಿಯೂ ತಂದೆ ಅಥವಾ ತಾಯಿಯ ಮೇಲೆ ದ್ವೇಷ ಹುಟ್ಟುವಂತೆ ಪರಸ್ಪರರು ಮಾಡುವುದು, ಇದರಿಂದಾಗಿ ಮಕ್ಕಳ ಭವಿಷ್ಯ ಅಧೋಗತಿಗೆ ಹೋಗುವುದು ಮುಂತಾದುವು ಇಂಥಹ ಶಿಥಿಲ ದಾಂಪತ್ಯದಲ್ಲಿ ಕಂಡು ಬರುತ್ತವೆ.
ಗಂಡು - ಹೆಣ್ಣು ಜೊತೆಗಿರಬೇಕು ಎಂದರೆ ಮದುವೇನೆ ಆಗಬೇಕಾ ?. ಏನೂ ಮಾಡ್ಕೊಳ್ಳದೆ ಸುಮ್ಮನೆ ಕೂಡಿಕೊಂಡಿದ್ದರೆ ಆಗಲ್ವಾ ?. ಗಂಡು ಮತ್ತು ಹೆಣ್ಣು ಸರಿಸಮಾನವಾಗಿ ಕೈತುಂಬಾ ಹಣವನ್ನು ಕಿವುಚುವ ಇಂದಿನ ಕಾಲದಲ್ಲಿ, ಎಲ್ಲರೂ ಅಲ್ಲದಿದ್ದರೂ, ಬಹಳ ಹೆಣ್ಣು - ಗಂಡುಗಳು ತಮ್ಮಲ್ಲಿಯೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳು ಇವು.
ಈ ಗೋಜಲಿನಲ್ಲಿ ವರ್ಷಗಳು ಉರುಳುತ್ತವೆ. ಯೌವನವೂ ಅದರ ಜೊತೆಗೆ ಸಾಗುತ್ತಿರುತ್ತದೆ. ಮುಪ್ಪು ಹತ್ತಿರ ಬಂದಿರುತ್ತದೆ. ಹುಳಿ ಮುಪ್ಪಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮರವಂತೂ ಮುಪ್ಪಾಗುತ್ತದೆ. ಯುವಕ ತನ್ನ ಹಳೆತನಕ್ಕೆ ತಲುಪಿ ಚರ್ಮ ಸುಕ್ಕುಗಟ್ಟುತ್ತಿರುವುದನ್ನು ಅನುಭವಿಸುತ್ತಾನೆ. ಯುವತಿಗೆ ಮುಟ್ಟು ಸಾವರಿಸುವ ಹಂತ ಬಂದಿರುತ್ತದೆ.
ಈ ಹಂತದಲ್ಲಿ ಬದುಕಿನ ವಾಸ್ತವಾಂಶ ಅರಿವಿಗೆ ಬರುತ್ತದೆ. ಈ ಸಮಯದಲ್ಲಿ ಮನುಷ್ಯನ ಬಯಕೆಗಳನ್ನು ನಿಭಾಯಿಸಿಕೊಳ್ಳಲು ' ಹಣ ' ವೊಂದೇ ಸಾಲದು. ಜೀವನದಲ್ಲಿ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಬೇಕು. ಅದರಂತೆಯೇ ಕೌಟುಂಬಿಕ ಜೀವನದಲ್ಲಿ ಒಂದು ಹೆಣ್ಣಿಗೆ ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಭೌತಿಕ ಅವಲಂಬನೆ ಎನ್ನುವುದು ಒಂದು ಅನಿವಾರ್ಯ ಸಂಗತಿ. ಸರಿಯಾದ ದಾಂಪತ್ಯವನ್ನು ರೂಪಿಸಿಕೊಳ್ಳಬೇಕು. ಬದ್ಧತೆ, ಒಡಂಬಡಿಕೆ, ನೆಮ್ಮದಿ, ಸುಗಮ ಸಾಂಗತ್ಯ ಇರಬೇಕು ಎಂದು ಅರಿವಾಗುವುದು. ಈ ಸೌಹಾರ್ದತೆಯಲ್ಲಿ ಸಂಸಾರ, ಮಕ್ಕಳು .... ಇವನ್ನೆಲ್ಲ ರೂಪಿಸಿಕೊಳ್ಳಬೇಕಾಗಿತ್ತು, ತಾವು ತಮ್ಮ ದಾಂಪತ್ಯದ ಪ್ರಥಮದಲ್ಲಿ ಮಕ್ಕಳನ್ನು ಹೊಂದಿ ನಾವು ಪೋಷಿಸಬೇಕಾಗಿತ್ತು. ತಮ್ಮ ಸುಗಮ ದಾಂಪತ್ಯದ ಮಾತ್ರದಿಂದ ಮಾಡಿದ ಪೋಷಣೆಯಿಂದ ಬೆಳೆದ ಮಕ್ಕಳು ಸಮರ್ಥರಾಗಿ ಇಳಿವಯಸ್ಸಿನಲ್ಲಿ ತಮಗೆ ಪೋಷಕರಾಗಲು ಸಾಧ್ಯವಾಗಿತ್ತು ಎಂಬ ಪ್ರಜ್ಞೆ ಕಾಲ ಮೀರಿದ ಮೇಲೆ ಅವರಿಗೆ ಬರುತ್ತದೆ. ಅಲ್ಲಿಯವರೆಗೂ ಯೌವನದ ಅವಧಿ ಅಲ್ಪ, ಅದು ಬೇಗ ಕಳೆದುಹೋಗುತ್ತದೆ, ಯಾವುದಕ್ಕೂ ಕಾಲವನ್ನೇ ಅನುಸರಿಸಿಕೊಂಡು ಜೀವನದ ಮಿತ ವಿಸ್ತಾರವನ್ನು ಅರಿತು ಮುನ್ನಡೆಯಬೇಕು ಎಂಬ ಸತ್ಯವನ್ನು ಗಮನಿಸುವ ಗೋಜಿಗೆ ಅವರು ಹೋಗಿರುವುದಿಲ್ಲ. ಈ ಸತ್ಯಗಳನ್ನು ತಿಳಿಯುವ ಹೊತ್ತಿಗೆ ಅವರಿಗೆ ಹಲ್ಲು ಬೀಳುವ ಕಾಲ ಬಂದಿರುತ್ತದೆ.
ಆದ್ದರಿಂದ " ಮದುವೆ " ಎನ್ನುವುದು ಹೆಣ್ಣು ಮತ್ತು ಗಂಡು ಈ ಎರಡು ಜೀವಗಳನ್ನು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಹೃದಯ ಪೂರ್ವಕವಾಗಿ ಬೆಸೆಯುವಂಥಹ ಒಂದು ವಿಶೇಷ ಘಟನೆ. ಇದು ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಪರಸ್ಪರ ಪರಿಪೂರ್ಣ ಸಮರ್ಪಣೆ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ಕೇವಲ "JUST GET TOGETHER " ಪದ್ಧತಿಯಲ್ಲಿ ಇದು ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಮದುವೆಯ ಮಹತ್ವ ಇರುವುದೇ ಇಲ್ಲಿ. ಅದನ್ನು ಹರಿದುಕೊಂಡು ಹದ್ದು ಮೀರಿದರೆ ಈಗಾಗಲೇ ಹೇಳಿದ ಗೊಂದಲಗಳನ್ನು ಅನುಭವಿಸಬೇಕಾಗುತ್ತದೆ.
ಮಾಡಿಕೊಂಡ ಮದುವೆಯನ್ನು ಮುರಿದುಕೊಂಡು ಇದಕ್ಕಿಂತ ಒಳ್ಳೆಯ ಸಂಗಾತಿಯನ್ನು ಪಡೆಯುತ್ತೇನೆ ಎಂದು ಕನವರಿಸಿ ಮತ್ತೊಬ್ಬನನ್ನು \ ಮತ್ತೊಬ್ಬಳನ್ನು ಕಟ್ಟಿಕೊಂಡರೆ ಸಾಂಗತ್ಯವನ್ನು ಪ್ರಯತ್ನ ಪೂರ್ವಕವಾಗಿ ನಿರ್ಮಿಸಿಕೊಳ್ಳದಿದ್ದರೆ ಅಲ್ಲಿಯೂ ದುರಂತವೇ.
ಇದ್ದಲ್ಲಿಯೇ ಕಾಡಿ ಕೂಡಿಕೊಂಡು ಹೋಗದವರು ಎಲ್ಲಿಯೂ ಹೊಂದಿಕೊಳ್ಳಲು ಕಷ್ಟಸಾಧ್ಯ. ಏಕೆಂದರೆ ಮನುಷ್ಯನ ಮನಸ್ಸು ಮತ್ತು ಸ್ವಭಾವ ಹೇಗಿರುತ್ತದೆಯೆಂದರೆ ಮತ್ತೊಬ್ಬನಿಗೆ ನಾವು ಹೊಂದಿಕೊಂಡು ಮುಂದೆ ಸಾಗಬೇಕೇ ವಿನಃ ಮತ್ತೊಬ್ಬನು ನಮಗೆ ಎಂದೂ, ಎಲ್ಲಿಯೂ, ಹೇಗೂ ಹೊಂದಿಕೊಳ್ಳುವುದಿಲ್ಲ.
~~~~~~ ಎಂ.ಗಣಪತಿ ಕಾನುಗೋಡು.
ತಾರೀಖು : 12 - 11 - 2014

ಮೂರ್ಛೆರೋಗ


ಪ್ರಸ್ತುತಿ : ಎಂ.ಗಣಪತಿ ಕಾನುಗೋಡು.
ಮೂರ್ಛೆರೋಗಕ್ಕೆ ವಿಶೇಷವಾದ ಗಮನ ಮತ್ತು ಚಿಕಿತ್ಸೆ ಬೇಕಾಗುತ್ತದೆ. ಇದಕ್ಕೆ ನರರೋಗ ತಜ್ಞರಿಂದ ಸಲಹೆಯನ್ನು ಪಡೆಯಬೇಕಾಗುತ್ತದೆ.
ಮೂರ್ಛೆರೋಗ ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ವ್ಯತ್ಯಾಸದಿಂದ ಮತ್ತು ರಾಸಾಯನಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ಕಾಣಿಸಿಕೊಳ್ಳುತ್ತದೆ.ಈ ದೋಷದಿಂದ ಮೆದುಳಿನ ಪ್ರಕ್ರಿಯೆಯಲ್ಲಿ ಬದಲಾವಣೆಯುಂಟಾಗಿ ಮೂರ್ಛೆ ಬರುತ್ತದೆ.
ಪ್ರಥಮ ಚಿಕಿತ್ಸೆ :
ಮೂರ್ಛೆರೋಗ ಬಂದ ವ್ಯಕ್ತಿಯನ್ನು ಬಾಗಿಸುವುದಾಗಲಿ, ಅವರ ತಕ್ಷಣದ ಚಲನೆಗಳನ್ನು ನಿಯಂತ್ರಿಸುವುದಾಗಲಿ, ಅವರ ಬಾಯಿಗೆ ಯಾವುದಾದರೂ ವಸ್ತುಗಳನ್ನು ಅಡ್ಡ ಇಡುವುದಾಗಲೀ ಮಾಡಕೂಡದು. ಅವರನ್ನು ಒಂದೆಡೆ ಮಲಗಿಸಿ ಚೆನ್ನಾಗಿ ಗಾಳಿ, ಬೆಳಕು ಅವನಿಗೆ ಸಿಗುವಂತೆ ನೋಡಿಕೊಳ್ಳಬೇಕು. ಆ ವ್ಯಕ್ತಿಯ ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶಾಂತತೆಯನ್ನು ಕಾಯ್ದುಕೊಳ್ಳಬೇಕು. ಯಾರೂ ಗಾಬರಿಯಾಗಿ ಆ ವ್ಯಕ್ತಿಯನ್ನು ಸುತ್ತುಗಟ್ಟಬಾರದು. ಅಪಾಯಕಾರಿ ವಸ್ತುಗಳನ್ನು ದೂರವಿರಿಸಿ ಧರಿಸಿದ ಬಟ್ಟೆಯನ್ನು ಸಡಿಲಿಸಬೇಕು. ಕೆಳಗೆ ಬೀದ್ದ ವ್ಯಕ್ತಿಯನ್ನು ಮಗ್ಗುಲಾಗಿ ಮಲಗಿಸಿ ತಲೆಯ ಕೆಳಗೆ ಮೆತ್ತನೆಯ ದಿಂಬನ್ನು ಇರಿಸಬೇಕು. ಸಾಧ್ಯವಾದಸ್ಟು ಮಟ್ಟಿಗೆ ಎಷ್ಟು ನಿಮಿಷ ಮೂರ್ಛೆ ಇತ್ತು ಎಂಬುದನ್ನು ಕರಾರುವಾಕ್ಕಾಗಿ ಗಮನಿಸಬೇಕು. ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಮೂರ್ಛೆ ತಾನಾಗಿಯೇ ನಿಲ್ಲುತ್ತದೆ. ಅಲ್ಲಿಯವರೆಗೆ ಸುತ್ತಲಿದ್ದವರು ಶಾಂತಿಯಿಂದ ಆ ವ್ಯಕ್ತಿಯನ್ನು ಮತ್ತು ಮೂರ್ಛೆ ನಿಲ್ಲುವ ಸಮಯವನ್ನು ಕಾಯಬೇಕು. ಆ ವ್ಯಕ್ತಿಗೆ ಪೂರ್ಣ ಪ್ರಜ್ಞೆ ಬರುವ ತನಕ ಕುಡಿಯಲು ಅಥವ ತಿನ್ನಲು ಏನನ್ನೂ ಕೊಡಬಾರದು. ಮೂರ್ಛೆ ಬಂದಾಗ ಚಿಟಿಕೆ ಹಾಕುವುದು,ಕೈಗೆ ಕಬ್ಬಿಣ ಹಿಡಿಸುವುದು, ಈರುಳ್ಳಿ ಅಥವ ಚಪ್ಪಲಿಯನ್ನು ಮೂಸಿಸುವುದು ಇತ್ಯಾದಿಗಳನ್ನು ಮಾಡಬಾರದು.ಇವುಗಳಿಂದ ಆ ವ್ಯಕ್ತಿಯು ಎಚ್ಚರಗೊಳ್ಳುತ್ತಾನೆಂಬುದು ಮೂಢನಂಬಿಕೆಯಷ್ಟೆ
ಐದು ನಿಮಿಷಗಳಲ್ಲಿ ಮೂರ್ಛೆ ನಿಲ್ಲದಿದ್ದಲ್ಲಿ ರೋಗಿಯನ್ನು ವ್ಯವಸ್ತಿತವಾಗಿ ವೈದ್ಯರ ಬಳಿ ಕೊಂಡೊಯ್ಯಬೇಕು. ಇದು ಅತಿ ಮುಖ್ಯ.
ಈ ರೋಗ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ.ಮೂರ್ಛೆಯ ಲಕ್ಷಣಗಳನ್ನು ಗಮನಿಸಿ ಇದನ್ನು ಎರಡು ವಿಧಗಳನ್ನಾಗಿ ವಿಂಗಡಿಸಲಾಗಿದೆ.
1 .ಪೂರ್ಣ ಪ್ರಮಾಣದ ಮೂರ್ಛೆ :
ಮೆದುಳಿಗೆ ಪೂರ್ಣಪ್ರಮಾಣದಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ದೋಷದಿಂದ ಈ ರೀತಿ ಮೂರ್ಛೆ ಸಂಭವಿಸುತ್ತದೆ. ಇಂಥಹವರಲ್ಲಿ ರೋಗದ ಬಗ್ಯೆ ಯಾವುದೇ ತರಹದ ಮುನ್ಸೂಚನೆ ಕಾಣುವುದಿಲ್ಲ. ಈ ರೀತಿಯ ಪೂರ್ಣ ಪ್ರಮಾಣದ ಮೂರ್ಛೆರೋಗದಲ್ಲಿಯೂ ಸುಮಾರು ನಾಲ್ಕು ವಿಧಗಳಿವೆ. A ) .Toniclonic seizure . B ) .Absence seizure . C ) .Myoclonic seizure . D ) .Atonic seizure .
2 . ಪಾರ್ಶ್ವಿಕ ಮೂರ್ಛೆ :
ಮೆದುಳಿನ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ವಿದ್ಯುತ್ ತರಂಗಗಳ ದೋಷ ಉಂಟಾಗುವುದರಿಂದ ಇದು ಸಂಭವಿಸುತ್ತದೆ. ಈ ತರಹದ ಮೂರ್ಛೆರೋಗ ಇರುವವರಿಗೆ ಮೂರ್ಛೆ ಬರುವ ಮೊದಲು ಮುನ್ಸೂಚನೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆ ಕೆಲವು ರೋಗಿಗಳಿಗೆ ಮುನ್ಸೂಚನೆಯ ಅರಿವಾಗದಿದ್ದರೂ ಅವರನ್ನು ಗಮನಿಸುತ್ತಿರುವವರು ಮುನ್ಸೂಚನೆಯನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ತರಹದ ಪಾರ್ಶ್ವಿಕ ಮೂರ್ಛೆಯಲ್ಲಿ ಎರಡು ವಿಧಗಳಿವೆ.
A ) ಸರಳ ಪಾರ್ಶ್ವಿಕ ಮೂರ್ಛೆ. B ) ಮಿಶ್ರ ಪಾರ್ಶ್ವಿಕ ಮೂರ್ಛೆ.
ಮೂರ್ಛೆರೋಗವನ್ನು ಮತ್ತು ಅದರ ಬಗೆಯನ್ನು ಕೇವಲ ರೋಗ ಲಕ್ಷಣಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯಲ್ಲಿ ಮೂರ್ಛೆರೋಗದ ಲಕ್ಷಣ ಕಂಡಾಗ ಜೊತೆಯಲ್ಲಿದ್ದವರು ಗಾಬರಿಯಾಗದೆ ಆ ಸಂದರ್ಭದಲ್ಲಿ ಆವ್ಯಕ್ತಿಯಲ್ಲಿ ಕಂಡುಬರುವ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅದನ್ನು ವೈದ್ಯರ ಹತ್ತಿರ ವಿವರಿಸಿದರೆ ಅದು ಮೂರ್ಛೆರೋಗವೋ, ಹೌದಾದರೆ ಅದು ಯಾವ ಬಗೆಯದು ಎಂದು ವೈದ್ಯರು ನಿರ್ಧರಿಸಲು ಸುಲಭವಾಗುತ್ತದೆ. ಇಂದಿನ ಮೊಬೈಲ್ ಯುಗದಲ್ಲಿ ಅ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಕಂಡುಬರುವ ಬದಲಾವಣೆಗಳನ್ನು ಚಿತ್ರೀಕರಿಸಿ ವೈದ್ಯರಿಗೆ ತೋರಿಸುವುದರಿಂದ ರೋಗದ ಖಚಿತತೆಯನ್ನು ನಿರ್ಣಯಿಸಲು ಸಹಾಯವಾಗುತ್ತದೆ.
ಮೂರ್ಛೆ ರೋಗಿಗಳಲ್ಲಿ ಕಾಯಿಲೆಗೆ ಕಾರಣವನ್ನು ಪತ್ತೆ ಹಚ್ಚಲು ಮತ್ತು ಆ ರೋಗ ಯಾವ ತರಹದ್ದೆಂದು ಗುರುತಿಸಲು ಕೆಲವು ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಅವೆಂದರೆ 1 .ರಕ್ತ ಪರೀಕ್ಷೆ. 2 .ಇ. ಇ. ಜಿ. 3 . ಮೆದುಳಿನ ಸ್ಕ್ಯಾನಿಂಗ್ 4 . C . S . F Analysis .
ಮೂರ್ಛೆರೋಗಕ್ಕೆ ಸಂಬಂಧಿಸಿದ ವೈದ್ಯರ ಸಲಹೆಯಂತೆ ಸೂಕ್ತ ಔಷಧ ಸೇವನೆ ಮುಖ್ಯವಾದ ಚಿಕಿತ್ಸೆ. ಔಷಧಗಳಿಂದ ರೋಗ ಹತೋಟಿಗೆ ಬಾರದವರಲ್ಲಿ [ ಇದು ಅತಿ ಕಡಿಮೆ ] ಅಂಥಹ ರೋಗಿಗಳಿಗೆ ಶಸ್ತ್ರಚಿಕಿತ್ಸೆಯಿಂದ ರೋಗವನ್ನು ಹತೋಟಿಗೆ ತರಬಹುದು.
ಈ ಕಾಯಿಲೆಯು ಯಾವುದೇ ವಯಸ್ಸಿನಲ್ಲಾದರೂ ಕಾಣಬಹುದು. ಇದು ಮಕ್ಕಳಲ್ಲಿ ಸ್ವಲ್ಪ ಹೆಚ್ಚು. ಹಾಗೆಂದು ಬಾಲಗ್ರಹದ ವಿಚಾರ ಬೇರೆ.ಅದನ್ನೂ ತಕ್ಕ ಚಿಕಿತ್ಸೆಯಿಂದ ಗುಣಮಾಡಬಹುದು. ವೃಧ್ಯಾಪ್ಯದಲ್ಲಿ ಈ ಕಾಯಿಲೆ ಸ್ವಲ್ಪ ಕಡಿಮೆ. ಇದು ಅಂಟುರೋಗವಲ್ಲ. ಈ ರೋಗವಿದ್ದವರು ಈಜುವುದು, ವಾಹನ ಚಾಲನೆ ಮುಂತಾದುವುದರಲ್ಲಿ ಜಾಗರೂಕರಾಗಿರಬೇಕು. ಕೆಲವು ವಿಧದ ಮೂರ್ಛೆರೋಗಗಳು ಆನುವಂಶಿಕವಾಗಿ ಬರಬಹುದು. ಆದರೆ ಹೆಚ್ಚಿನ ಪ್ರಸಂಗಗಳಲ್ಲಿ ಇದು ಅನುವಂಶಿಕವಲ್ಲ ಎಂಬುದು ಮುಖ್ಯ. ಈ ರೋಗದಿಂದ ಬಳಲುವ ಎಲ್ಲರೂ ಸಮಾಜದ ಎಲ್ಲರಂತೆ ಜೀವನ ನಡೆಸಬಹುದು. ಮುಖ್ಯವಾಗಿ ಹೇಳುವುದಾದರೆ ಈ ರೋಗವಿರುವ ಗರ್ಭಿಣಿ ಸ್ತ್ರೀಯರು, ಬಾಣಂತಿಯರು ಕೂಡ ವೈದ್ಯರ ಸಲಹೆಯಂತೆ ಮಾತ್ರೆ ಸೇವನೆ ಮಾಡುತ್ತ ಇದ್ದರೆ, ಆ ಸಂದರ್ಭದಲ್ಲಿ ಅನುಸರಿಸಬೇಕಾದ ವೈದ್ಯರ ಸಲಹೆಯನ್ನು ಪಾಲಿಸಿದರೆ ಎಲ್ಲರಂತೆ ಇರಬಹುದು
ಮೂರ್ಛೆರೋಗವಿದ್ದವರು ಪಾಲಿಸಬೇಕಾದ ಅಂಶಗಳು. :
+ ಈ ರೋಗವಿದ್ದವರು ಸಂಬಂಧಿಸಿದ ವೈದ್ಯರ ಸಲಹೆಯ ಪ್ರಕಾರವೇ ಔಷಧವನ್ನು ಸೇವಿಸುವುದರಲ್ಲಿ ತಪ್ಪಬಾರದು. + ಕ್ರಮ ತಪ್ಪದೆ ಪ್ರತಿನಿತ್ಯ ಔಷಧವನ್ನು ಸೇವಿಸಬೇಕು.
+ ವೈದ್ಯರ ಸೂಚನೆಯಿಲ್ಲದೆ ಔಷಧವನ್ನು ಮತ್ತು ಅದರ ಪ್ರಮಾಣವನ್ನು ಬಲಿಸಬಾರದು.
+ ಯಾವುದೇ ಕಾರಣಕ್ಕೂ ವೈದ್ಯರು ಸಲಹೆ ಮಾಡಿದ ಮಾತ್ರೆಗಳನ್ನು ದಿಢೀರನೆ ನಿಲ್ಲಿಸಬಾರದು. ಹೀಗೆ ಮಾಡಿದಲ್ಲಿ ಮೂರ್ಛೆರೋಗ ಮರುಕಳಿಸುವ ಸಾಧ್ಯತೆ ಇದೆ. ಅಲ್ಲದೆ ಹಾಗೆ ಬರುವ ರೋಗ ಇನ್ನೂ ತೀವ್ರ ಸ್ವರೂಪದ್ದಾಗಬಹುದು.
ತಾರೀಖು :25 - 11 - 2014
ಮಾಹಿತಿಯ ಕೃಪೆ : ಡಾ ||. ಎ. ಶಿವರಾಮಕೃಷ್ಣ . ನರರೋಗತಜ್ಞರು. ಶಿವಮೊಗ್ಗ. [ ಅವರ "ಮೆದುಳಿನ ಕಾಯಿಲೆಗಳು" -- ಪುಸ್ತಕದಿಂದ ]

Monday 17 November 2014

ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು

~~~~~~ ಎಂ.ಗಣಪತಿ. ಕಾನುಗೋಡು
ಇಂದಿನ ತೀವ್ರಗಾಮಿ ಚಲನೆಯ ಸಮಾಜದಲ್ಲಿ ಯುವತಿಯರು ಯುವಕರಿಗೆ ಸರಿಸಮನಾಗಿ ವಿದ್ಯಾರ್ಹತೆ, ಸ್ವಂತ ದುಡಿದು ಹಣ ಗಳಿಸಬೇಕೆನ್ನುವ ಹಪಾಹಪಿ, ಗಂಡಿನ ಆಧಾರವಿಲ್ಲದೆ ಒಬ್ಬಂಟಿಯಾಗಿ ಮುನ್ನುಗ್ಗುವ ದಾಷ್ಟ್ಯ ...... ಈ ಎಲ್ಲವನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ಹೆಚ್ಚಿನ ಭಾಗದ ಯುವತಿಯರಿಗೆ ಜೀವನೋಪಾಯಕ್ಕಾಗಿ ಹಿಂದಿನಂತೆ ಪುರುಷನನ್ನು ಅವಲಂಬಿಸುವ ಅಗತ್ಯವಿಲ್ಲ. ಇದಕ್ಕೆಲ್ಲ ಕಾರಣ ಅವರು ಹೊಂದಿರುವ ಆರ್ಥಿಕ ಸ್ವಾವಲಂಬನೆ.
ಇಲ್ಲಿ ಒಂದು ಪ್ರಶ್ನೆ ಇದೆ. ಪುರುಷನಿಗೆ ಆಗಲಿ ಮಹಿಳೆಗೆ ಆಗಲಿ, ಹಣವೊಂದೇ ಜೀವನದ ಏಕಮೇವ ಪೂರೈಕೆಯೇ? ಅಲ್ಲ. ಬದುಕಿನ ಅನೇಕ " ಬೇಕು " ಗಳಲ್ಲಿ ಹಣವು ಒಂದು ಅಷ್ಟೆ. ಆದರೆ ಹಣವೊಂದರಿಂದಲೇ ಬದುಕಿನ ಎಲ್ಲ ಬಯಕೆಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯವಿಲ್ಲ. ಮನುಷ್ಯನ ಅನೇಕ " ಬೇಕು " [ Wants ] ಗಳಲ್ಲಿ ಒಂದು ಹೆಣ್ಣಿಗೆ ಒಂದು ಗಂಡು, ಒಂದು ಗಂಡಿಗೆ ಒಂದು ಹೆಣ್ಣು ಬೇಕು ಎನ್ನುವುದು ಪ್ರಮುಖ. ಈ 'ಬೇಕು' ಅನೇಕ ಕಾರಣಗಳಿಂದ ಒಂದು ಅಗತ್ಯ. ಇದರಿಂದಾಗಿಯೇ ' ವಿವಾಹದ ಪರಿಕಲ್ಪನೆ ' ಹುಟ್ಟಿಕೊಂಡಿದ್ದು.
ಇವತ್ತಿನ ದುಡಿಮೆಯ ಸುಪತ್ತಿಗೆಯಲ್ಲಿ ಆ ಕ್ಸೇತ್ರದಲ್ಲಿರುವ ಎಲ್ಲ ಯುವಜನರಿಗೂ ಹಣದ ಜಲದ ಬುಗ್ಗೆ [ Foutain ] ಅವರ ಅಂಗೈಯಲ್ಲೇ ಇದೆ. ಈ ಅಮಲಿನಲ್ಲಿ ದಾಂಪತ್ಯದ ಬಾಂಧವ್ಯ ಬಹುತೇಕ ಯುವಜನರಲ್ಲಿ ಶಿಥಿಲವಾಗುತ್ತಿದೆ. ಯಾರಿಗೆ ಯಾರೂ ಕೇರ್ ಮಾಡುವ ಸ್ಥಿತಿಯಲ್ಲಿಲ್ಲ. ಏಕೆಂದರೆ ತನ್ನ ಹೊಟ್ಟೆಗೆ ಯಾರೂ ಏನು ದುಡಿದು ಹಾಕುವ ಅನಿವಾರ್ಯತೆ ಇಲ್ಲ. ಹಣದ ಎದುರು ಬದುಕಿನ ಉಳಿದ ಎಲ್ಲಾ 'ಬೇಕು 'ಗಳು ಅವರಿಗೆ ಈಗ ಗೋಚರಿಸುವುದಿಲ್ಲ.
ಇದರ ಪರಿಣಾಮ ವಿಚ್ಚೇದನ . ನಂತರ ತನ್ನ ಮಾತನ್ನೇ ಕೇಳುವಂಥಹ ಸಂಗಾತಿಗಾಗಿ ಶೋಧನೆ, ಅಂಥಹವರು ಸಿಕ್ಕಿದರೆ ತನ್ನ ಕರಾರುಗಳನ್ನು ಮುಂಚೆಯೇ ಮಂಡಿಸಿ ಅದು ಓ. ಕೆ . ಆದರೆ ನಂತರ ಮದುವೆ. ಆ ಮದುವೆಯಿಂದಾದ ದಾಂಪತ್ಯವೂ ಸಾಪ್ರದಾಯಿಕವಾದುದಲ್ಲ. ಅದು " Get together " ಮಾದರಿ. ಇದೇ ಸಂಕ್ರಮಣದ ಸ್ಥಿತಿಯಲ್ಲಿ ಇಂದಿನ ನವದಂಪತಿಗಳ ಬದುಕು.
ಒಮ್ಮೆ ವಿಚ್ಚೇದನವಾಗದಿದ್ದರೂ ಬಹು ದಂಪತಿಗಳಲ್ಲಿ ಸಾಮರಸ್ಯವಿರುವುದಿಲ್ಲ. ಅದು ಶಿಥಿಲ ದಾಂಪತ್ಯ. ಪರಸ್ಪರ ಭಿನ್ನಾಭಿಪ್ರಾಯ, ಬದ್ಧತೆಯ ಕೊರತೆ, ಯಾರಿಗೆ ಯಾರೂ ಸೋಲುವುದಿಲ್ಲ. ಪರಸ್ಪರರ ಮೇಲೆ ಮಕ್ಕಳನ್ನೇ ಅಸ್ತ್ರವನ್ನಾಗಿ ಪ್ರಯೋಗಿಸುವುದು, ಮಕ್ಕಳಲ್ಲಿಯೂ ತಂದೆ ಅಥವಾ ತಾಯಿಯ ಮೇಲೆ ದ್ವೇಷ ಹುಟ್ಟುವಂತೆ ಪರಸ್ಪರರು ಮಾಡುವುದು, ಇದರಿಂದಾಗಿ ಮಕ್ಕಳ ಭವಿಷ್ಯ ಅಧೋಗತಿಗೆ ಹೋಗುವುದು ಮುಂತಾದುವು ಇಂಥಹ ಶಿಥಿಲ ದಾಂಪತ್ಯದಲ್ಲಿ ಕಂಡು ಬರುತ್ತವೆ.
ಗಂಡು - ಹೆಣ್ಣು ಜೊತೆಗಿರಬೇಕು ಎಂದರೆ ಮದುವೇನೆ ಆಗಬೇಕಾ ?. ಏನೂ ಮಾಡ್ಕೊಳ್ಳದೆ ಸುಮ್ಮನೆ ಕೂಡಿಕೊಂಡಿದ್ದರೆ ಆಗಲ್ವಾ ?. ಗಂಡು ಮತ್ತು ಹೆಣ್ಣು ಸರಿಸಮಾನವಾಗಿ ಕೈತುಂಬಾ ಹಣವನ್ನು ಕಿವುಚುವ ಇಂದಿನ ಕಾಲದಲ್ಲಿ, ಎಲ್ಲರೂ ಅಲ್ಲದಿದ್ದರೂ, ಬಹಳ ಹೆಣ್ಣು - ಗಂಡುಗಳು ತಮ್ಮಲ್ಲಿಯೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳು ಇವು.
ಈ ಗೋಜಲಿನಲ್ಲಿ ವರ್ಷಗಳು ಉರುಳುತ್ತವೆ. ಯೌವನವೂ ಅದರ ಜೊತೆಗೆ ಸಾಗುತ್ತಿರುತ್ತದೆ. ಮುಪ್ಪು ಹತ್ತಿರ ಬಂದಿರುತ್ತದೆ. ಹುಳಿ ಮುಪ್ಪಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಮರವಂತೂ ಮುಪ್ಪಾಗುತ್ತದೆ. ಯುವಕ ತನ್ನ ಹಳೆತನಕ್ಕೆ ತಲುಪಿ ಚರ್ಮ ಸುಕ್ಕುಗಟ್ಟುತ್ತಿರುವುದನ್ನು ಅನುಭವಿಸುತ್ತಾನೆ. ಯುವತಿಗೆ ಮುಟ್ಟು ಸಾವರಿಸುವ ಹಂತ ಬಂದಿರುತ್ತದೆ.
ಈ ಹಂತದಲ್ಲಿ ಬದುಕಿನ ವಾಸ್ತವಾಂಶ ಅರಿವಿಗೆ ಬರುತ್ತದೆ. ಈ ಸಮಯದಲ್ಲಿ ಮನುಷ್ಯನ ಬಯಕೆಗಳನ್ನು ನಿಭಾಯಿಸಿಕೊಳ್ಳಲು ' ಹಣ ' ವೊಂದೇ ಸಾಲದು. ಜೀವನದಲ್ಲಿ ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಬೇಕು. ಯಾರೂ ಪರಿಪೂರ್ಣ ಸಾಮರ್ಥ್ಯವನ್ನು ಹೊಂದಿಲ್ಲ. ಅದರ ಪೂರೈಕೆಗಾಗಿ ಮತ್ತೊಬ್ಬರನ್ನು ಅವಲಂಬಿಸುವುದು ಅಗತ್ಯ. ಅದರಂತೆಯೇ ಕೌಟುಂಬಿಕ ಜೀವನದಲ್ಲಿ ಒಂದು ಹೆಣ್ಣಿಗೆ ಗಂಡು ಬೇಕು. ಒಂದು ಗಂಡಿಗೆ ಒಂದು ಹೆಣ್ಣು ಬೇಕು. ಭೌತಿಕ ಅವಲಂಬನೆ ಎನ್ನುವುದು ಒಂದು ಅನಿವಾರ್ಯ ಸಂಗತಿ. ಸರಿಯಾದ ದಾಂಪತ್ಯವನ್ನು ರೂಪಿಸಿಕೊಳ್ಳಬೇಕು. ಬದ್ಧತೆ, ಒಡಂಬಡಿಕೆ, ನೆಮ್ಮದಿ, ಸುಗಮ ಸಾಂಗತ್ಯ ಇರಬೇಕು ಎಂದು ಅರಿವಾಗುವುದು. ಈ ಸೌಹಾರ್ದತೆಯಲ್ಲಿ ಸಂಸಾರ, ಮಕ್ಕಳು .... ಇವನ್ನೆಲ್ಲ ರೂಪಿಸಿಕೊಳ್ಳಬೇಕಾಗಿತ್ತು, ತಾವು ತಮ್ಮ ದಾಂಪತ್ಯದ ಪ್ರಥಮದಲ್ಲಿ ಮಕ್ಕಳನ್ನು ಹೊಂದಿ ನಾವು ಪೋಷಿಸಬೇಕಾಗಿತ್ತು. ತಮ್ಮ ಸುಗಮ ದಾಂಪತ್ಯದ ಮಾತ್ರದಿಂದ ಮಾಡಿದ ಪೋಷಣೆಯಿಂದ ಬೆಳೆದ ಮಕ್ಕಳು ಸಮರ್ಥರಾಗಿ ಇಳಿವಯಸ್ಸಿನಲ್ಲಿ ತಮಗೆ ಪೋಷಕರಾಗಲು ಸಾಧ್ಯವಾಗಿತ್ತು ಎಂಬ ಪ್ರಜ್ಞೆ ಕಾಲ ಮೀರಿದ ಮೇಲೆ ಅವರಿಗೆ ಬರುತ್ತದೆ. ಅಲ್ಲಿಯವರೆಗೂ ಯೌವನದ ಅವಧಿ ಅಲ್ಪ, ಅದು ಬೇಗ ಕಳೆದುಹೋಗುತ್ತದೆ, ಯಾವುದಕ್ಕೂ ಕಾಲವನ್ನೇ ಅನುಸರಿಸಿಕೊಂಡು ಜೀವನದ ಮಿತ ವಿಸ್ತಾರವನ್ನು ಅರಿತು ಮುನ್ನಡೆಯಬೇಕು ಎಂಬ ಸತ್ಯವನ್ನು ಗಮನಿಸುವ ಗೋಜಿಗೆ ಅವರು ಹೋಗಿರುವುದಿಲ್ಲ. ಈ ಸತ್ಯಗಳನ್ನು ತಿಳಿಯುವ ಹೊತ್ತಿಗೆ ಅವರಿಗೆ ಹಲ್ಲು ಬೀಳುವ ಕಾಲ ಬಂದಿರುತ್ತದೆ.
ಆದ್ದರಿಂದ " ಮದುವೆ " ಎನ್ನುವುದು ಹೆಣ್ಣು ಮತ್ತು ಗಂಡು ಈ ಎರಡು ಜೀವಗಳನ್ನು ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ, ಹೃದಯ ಪೂರ್ವಕವಾಗಿ ಬೆಸೆಯುವಂಥಹ ಒಂದು ವಿಶೇಷ ಘಟನೆ. ಇದು ಒಬ್ಬರಿಗೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು ಪರಸ್ಪರ ಪರಿಪೂರ್ಣ ಸಮರ್ಪಣೆ ಮಾಡಿಕೊಳ್ಳುವಲ್ಲಿ ಸಹಕಾರಿಯಾಗಬೇಕು. ಕೇವಲ "JUST GET TOGETHER " ಪದ್ಧತಿಯಲ್ಲಿ ಇದು ಸಾಧ್ಯವಾಗುವುದಿಲ್ಲ. ಸಾಂಪ್ರದಾಯಿಕ ಮದುವೆಯ ಮಹತ್ವ ಇರುವುದೇ ಇಲ್ಲಿ. ಅದನ್ನು ಹರಿದುಕೊಂಡು ಹದ್ದು ಮೀರಿದರೆ ಈಗಾಗಲೇ ಹೇಳಿದ ಗೊಂದಲಗಳನ್ನು ಅನುಭವಿಸಬೇಕಾಗುತ್ತದೆ.
ಮಾಡಿಕೊಂಡ ಮದುವೆಯನ್ನು ಮುರಿದುಕೊಂಡು ಇದಕ್ಕಿಂತ ಒಳ್ಳೆಯ ಸಂಗಾತಿಯನ್ನು ಪಡೆಯುತ್ತೇನೆ ಎಂದು ಕನವರಿಸಿ ಮತ್ತೊಬ್ಬನನ್ನು \ ಮತ್ತೊಬ್ಬಳನ್ನು ಕಟ್ಟಿಕೊಂಡರೆ ಸಾಂಗತ್ಯವನ್ನು ಪ್ರಯತ್ನ ಪೂರ್ವಕವಾಗಿ ನಿರ್ಮಿಸಿಕೊಳ್ಳದಿದ್ದರೆ ಅಲ್ಲಿಯೂ ದುರಂತವೇ.
ಇದ್ದಲ್ಲಿಯೇ ಕಾಡಿ ಕೂಡಿಕೊಂಡು ಹೋಗದವರು ಎಲ್ಲಿಯೂ ಹೊಂದಿಕೊಳ್ಳಲು ಕಷ್ಟಸಾಧ್ಯ. ಏಕೆಂದರೆ ಮನುಷ್ಯನ ಮನಸ್ಸು ಮತ್ತು ಸ್ವಭಾವ ಹೇಗಿರುತ್ತದೆಯೆಂದರೆ ಮತ್ತೊಬ್ಬನಿಗೆ ನಾವು ಹೊಂದಿಕೊಂಡು ಮುಂದೆ ಸಾಗಬೇಕೇ ವಿನಃ ಮತ್ತೊಬ್ಬನು ನಮಗೆ ಎಂದೂ, ಎಲ್ಲಿಯೂ, ಹೇಗೂ ಹೊಂದಿಕೊಳ್ಳುವುದಿಲ್ಲ.