Wednesday 15 June 2016

ಉಳ್ಳಾಗಡ್ಡೆ ಲಾಭ ....?


 --ಎಂ. ಗಣಪತಿ, ಕಾನುಗೋಡು 

   ವ್ಯಕ್ತಿಯೊಬ್ಬ ಯಾವುದಾದರೂ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಾನೆ. ಆಗ ಜನರು ಅವನದು ಉಳ್ಳಾಗಡ್ಡೆ ಲಾಭದ ಕತೆಯಾಯಿತು ಎಂದು ಆ ವ್ಯವಹಾರದ ಕುರಿತು ವರ್ಣನೆ ಮಾಡುತ್ತಾರೆ.

   ಹಾಗಾದರೆ ಉಳ್ಳಾಗಡ್ಡೆ ಲಾಭದ ಕತೆ ಎಂದರೆ ಏನು ? . ವ್ಯಾಪಾರಿಯೊಬ್ಬ ಒಂದು ಕ್ವಿಂಟಾಲ್ ಉಳ್ಳಾಗಡ್ಡೆಯನ್ನು ತಂದರೆ ಅದನ್ನು ತೊಂಬತ್ತು ಕೇಜಿ ಲೆಕ್ಕಕ್ಕೆ ಹಿಡಿದು ಮಾರುತ್ತಾನೆ. ಏಕೆಂದರೆ ನೀರುಳ್ಳಿ ಆರಿಕೆ ಬರುತ್ತದೆ . ಸಿಪ್ಪೆ ಹಾರಿ ಹೋಗುತ್ತದೆ . ಹೆಚ್ಚಾಗಿ ಕೊಳೆತು ಹೋಗುತ್ತದೆ. ಹತ್ತು ಕೇಜಿ ಕಡಿಮೆ ಲೆಕ್ಕಕ್ಕೆ ಹಿಡಿದು ಕೊಂಡರೂ ಪೂರ್ತಿ ವ್ಯಾಪಾರ ಮಾಡಿ ಲೆಕ್ಕಾಚಾರ ಮಾಡಿಕೊಳ್ಳುವ ಹೊತ್ತಿಗೆ ಕೆಲವೊಮ್ಮೆ ಅವನಿಗೆ ವ್ಯಾಪಾರಕ್ಕೆ ಸಿಗುವುದು  ಎಂಬತ್ತೇ ಕೇಜಿಯಾಗಿರುತ್ತದೆ . ಅಲ್ಲಿಗೂ ಇನ್ನೂ ಹತ್ತು ಕೇಜಿ ತೂಕದಲ್ಲಿ ಕಡಿಮೆ ಬಂದಿರುತ್ತದೆ . ಒಟ್ಟಾರೆ ನಷ್ಟವೇ ಸರಿ. 

   ತಕ್ಕಡಿಗೆ  ಸಂಸ್ಕೃತದಲ್ಲಿ  " ತುಲಾ " ಎನ್ನುತ್ತಾರೆ . ತುಲಾ ಲಘ್ನ , ತುಲಾ ರಾಶಿ , ತುಲಾ ಭಾರ ಎನ್ನುವುದಿಲ್ಲವೇ? ಹಾಗೆ.  ಅದಕ್ಕಾಗಿ ಗಾದೆ ಇರುವುದು " ಉಳ್ಳಾಗಡ್ಡೆ ಲಾಭ ತುಲಾದಲ್ಲಿ ಹೋಯಿತು ". 

  ಕೆಲವು ಜನ ತಮ್ಮ ತಲುಬಿಗಾಗಿ ಅದಕ್ಕೊಂದು ಒತ್ತು ಕೊಟ್ಟುಕೊಂಡಿದ್ದರ ಪರಿಣಾಮ ಆ ಗಾದೆಯು ಬಹಿರಂಗವಾಗಿ ಹೇಳಲಿಕ್ಕೆ ಬಾರದಷ್ಟು ಅಪಭ್ರಂಶಗೊಂಡಿದೆ. ಓ ದೇವರೇ .. !!



ಎಂ. ಗಣಪತಿ, ಕಾನುಗೋಡು  
ಬಿ. ಮಂಚಾಲೆ ಅಂಚೆ, - 577 431
ಸಾಗರ ತಾ. ಶಿವಮೊಗ್ಗ ಜಿಲ್ಲೆ.
Email : m.ganapathi.kangod@gmail.com
Blog : mgkangod.blogspot.com
Mob : 9481968771




No comments:

Post a Comment

Note: only a member of this blog may post a comment.