Monday 30 March 2015

@ ಕಚಗುಳಿ :

ನಾಗಪ್ಪ ಶೆಟ್ಟರ ಅಂಗಡಿಗೆ ಮೊನ್ನೆ ರಾತ್ರಿ ಜೀನಸು ಸಾಮಾನು ತರೋಣ ಅಂತ ಹೋಗಿದ್ದೆ. ಶೆಟ್ಟರು ನಾನು ಹೇಳಿದ ಸಾಮಾನಿನ ಪಟ್ಟಿಯನ್ನು ಬರೆಯುತ್ತಿದ್ದರು. ತಕ್ಷಣ ವಿದ್ಯುತ್ ಹೋಗಿ ಅಂಗಡಿಯೆಲ್ಲಾ ಕಪ್ಪಾಯಿತು.ತತ್ ಕ್ಷಣ ಶೆಟ್ರು ನನ್ನ ಎರಡೂ ಕೈಗಳನ್ನು ಘಟ್ಟಿಯಾಗಿ ಹಿಡಿದುಕೊಂಡು " ದೇವ್ರೂ ಇವತ್ತು ನೀವು ನಮ್ಮ ಮನೆಗೆ ಊಟಕ್ಕೆ ಬರಬೇಕು " ಅಂದ್ರು. 
"ಇವತ್ತು ಆಗಲ್ಲ, ಇನ್ನೊಂದು ದಿನ ಖಂಡಿತ ಬರ್ತೀನಿ " ಎಂದೆ.
" ಹಾಗಂದ್ರೆ ಆಗೋಲ್ಲ ದೇವ್ರೂ, ನಾನೇನು ನಿಮ್ಮನ್ನ ದಿನಾ ಊಟಕ್ಕೆ ಕರೀತೀನಾ ? " ಎನ್ನುತ್ತಾ ನನ್ನ ಕೈಗಳನ್ನು ಕಪ್ಪಿನಲ್ಲಿಯೇ ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡರು.
ನಾನು ಬೇಡವೆಂದಷ್ಟೂಅವರ ಒತ್ತಾಯ ಜಾಸ್ತಿ ಆಗ್ತಾ ಹೋಯ್ತು. ನನ್ನ ಕೈಗಳನ್ನಂತೂ ಬಿಡಲೇ ಇಲ್ಲ.
ಸದ್ಯ ವಿದ್ಯುತ್ ಬಂದು ದೀಪ ಬಂತು.
ಶೆಟ್ರು " ಸರಿ, ನಿಮಗಿಷ್ಟ ಇಲ್ಲ ಎಂದ ಮೇಲೆ ನಾನು ಯಾಕೆ ಒತ್ತಾಯ ಮಾಡಲಿ " ಎನ್ನುತ್ತಾ ನನ್ನ ಕೈಗಳನ್ನು ಬಿಟ್ಟರು.
ದೀಪ ಆರಿ ಅಂಗಡಿಯೆಲ್ಲಾ ಕಪ್ಪಾದಾಗ ನಾನು ಅವರ ಹಣದ ಪೆಟ್ಟಿಗೆ ಬಳಿ ಕುಳಿತಿದ್ದುದೇ ಅವರ ಆ ಒತ್ತಾಯಕ್ಕೆ ಕಾರಣವಾಗಿತ್ತು

No comments:

Post a Comment

Note: only a member of this blog may post a comment.