Monday 22 August 2016

##### ನೆಲ್ಲಿ ಫೆಲ #####


ಒಂದು ಮಾಹಿತಿ.
~~~~ ಸಂಗ್ರಹ : ಎಂ. ಗಣಪತಿ. ಕಾನುಗೋಡು.
ನೆಲ್ಲಿಯ ಫಲವು ಶ್ರೀಹರಿಗೆ ಅತ್ಯಂತ ಪ್ರಿಯವಾದದ್ದು. ಹಿಂದೆ ಬ್ರಹ್ಮನು ಹುಟ್ಟಿ ವಿಷ್ಣುವನ್ನು ಕುರಿತು ತಪಸ್ಸಿನಲ್ಲಿ ನಿರತನಾದನು. ಅವನ ತಪಸ್ಸಿಗೆ ಮೆಚ್ಚಿ ವಿಷ್ಣುವು ಪ್ರತ್ಯಕ್ಷ್ಯನಾದಾಗ ಬ್ರಹ್ಮನಿಗೆ ಸಂತೋಷವಾಗಿ ಆನಂದ ಭಾಷ್ಪಗಳು ನೆಲಕ್ಕೆ ಬಿದ್ದು ಅಲ್ಲಿ ನೆಲ್ಲಿಯ ಮರವು ಹುಟ್ಟಿಕೊಂಡಿತು ಎಂದು ಹೇಳಲಾಗಿದೆ.
ಹಿಂದೆ, ಬ್ರಹ್ಮಚಾರಿಯಾಗಿದ್ದ ಶ್ರೀ ಶಂಕರರು ಒಬ್ಬಳು ಬಡ ಬ್ರಾಹ್ಮಣ ಸ್ತ್ರೀಯ ಮನೆಗೆ ಬಿಕ್ಷೆಗೆ ಹೋಗುತ್ತಾರೆ. ಆಕೆ ತನ್ನಲ್ಲಿರುವ ಒಂದು ನೆಲ್ಲಿಕಾಯಿಯನ್ನೇ ಅವರಿಗೆ ಬಿಕ್ಷೆಯಾಗಿ ನೀಡುತ್ತಾಳೆ. ಆ ಘಳಿಗೆಯಲ್ಲಿ ಭಗವಾನ್ ಶ್ರೀ ಶಂಕರರು ಕನಕಧಾರಾ ಸ್ತೋತ್ರವನ್ನು ರಚಿಸಿ ಹೇಳುತ್ತಾರೆ. ಆಗ ಆ ಸ್ತೋತ್ರದ ಮಹಿಮೆಯಿಂದ ಅಲ್ಲಿ ಬಂಗಾರದ ನೆಲ್ಲಿಕಾಯಿಗಳು ಪ್ರತ್ಯಕ್ಷ ಉರುಳುತ್ತವೆ. ಇಂದಿಗೂ ಆ ಕನಕಧಾರಾ ಸ್ತೋತ್ರವನ್ನು ಪಠಿಸಿದರೆ ದಾರಿದ್ರ್ಯ ನಿವಾರಣೆ ಆಗುತ್ತದೆ ಎಂದು ಹೇಳುತ್ತಾರೆ.
ನೆಲ್ಲಿಯ ಮರವು ಮನೆಯ ಅಂಗಳದಲ್ಲಿ ಇದ್ದರೆ ಬಡತನವು ಬರುವುದಿಲ್ಲ. ಐಶ್ವರ್ಯವನ್ನು ಬಯಸುವವರು ನೆಲ್ಲಿ ಫಲವನ್ನು ನೀರಿನಲ್ಲಿ ಹಾಕಿ ಆ ನೀರಿನಿಂದ ಸ್ನಾನವನ್ನು ಮಾಡಬೇಕು. ಅದರಲ್ಲೂ ಏಕಾದಶಿಯಂದು ಈ ಸ್ನಾನ ಹೆಚ್ಚು ಪುಣ್ಯದಾಯಕ.
ನೆಲ್ಲಿಯನ್ನು ಧಾತ್ರಿ, ತಿಕ್ತ, ಅದಿರೋಹ, ಅಮಲಕ, ಅಮೃತ ಎಂದೆಲ್ಲ ಕರೆಯುತ್ತಾರೆ.
ಅನೇಕ ಆಯುರ್ವೇದ ಔಷಧಗಳಲ್ಲಿ ನೆಲ್ಲಿಯನ್ನು ಬಳಸುತ್ತಾರೆ.
+ಮೆದುಳಿನ ಕಾಯಿಲೆ +ಹೊಟ್ಟೆನೋವು +ಬಾಯಿ ಹುಣ್ಣು +ತಲೆಸುತ್ತುವಿಕೆ +ಅಜೀರ್ಣ +ಅತಿ ಬೆವರು ವಸರುವಿಕೆ +ಆಸನಾಗ್ರದಲ್ಲಿ ಆಗುವ ಉರಿ +ಬಾಯಿ, ಮೂಗು, ಗುದದ್ವಾರದಿಂದ ಹೊರಬೀಳುವ ರಕ್ತದ ತಡೆಗೆ + ' ಸಿ ' ಜೀವಸ್ತ್ವದ ಕೊರತೆ ನಿವಾರಣೆಗೆ + ಕಣ್ಣಿನ ದೋಷ + ದೇಹ ಮನಸ್ಸಿನ ಚೈತನ್ಯ ವೃದ್ಧಿಗೆ +ಸಿಹಿಮೂತ್ರ + ಮಧುಮೇಹ + ಕೂದಲು ಉದುರುವಿಕೆ ಮತ್ತು ಕೇಶದ ಬೆಳವಣಿಗೆ +ನೆಗಡಿ, ಉಬ್ಬಸ, ಕ್ಷಯ, ಜ್ಞಾಪಕ ಶಕ್ತಿ ಹೀನತೆ, ಅಕಾಲ ಮುಪ್ಪು ನಿವಾರಣೆ ಹೀಗೆ ಮನುಷ್ಯನ ಅನೇಕ ಮಾನಸಿಕ ಮತ್ತು ದೈಹಿಕ ರೋಗಗಳನ್ನು ನಿವಾರಣೆಯಲ್ಲಿ ನೆಲ್ಲಿ ಫೆಲವನ್ನು ಉಪಯೋಗಿಸಲಾಗುತ್ತದೆ.
ತಾರೀಖು : 21 - 8 - 2016.

No comments:

Post a Comment

Note: only a member of this blog may post a comment.