Wednesday 29 October 2014

@ ಮನೆ ಮದ್ದು : ಬಾಳೆಹಣ್ಣು ಉಪಯೋಗ

~~~~~~~~ ಸಂಗ್ರಹ : ಎಂ.ಗಣಪತಿ.ಕಾನುಗೋಡು.
ಸುಲಭ ಬೆಲೆಯಲ್ಲಿ ಎಲ್ಲರ ಕೈಗೂ ದೊರಕುವ ಫಲ ಬಾಳೆಹಣ್ಣು. ಇದರ ಸಿಪ್ಪೆಗೆ ಕ್ರಿಮಿ, ಕೀಟಗಳ ನಿರೋಧಕ ಶಕ್ತಿ ಇದೆ. ಆದ್ದರಿಂದ ಕ್ರಿಮಿ ಈ ಹಣ್ಣನ್ನು ಭೇದಿಸಿ ಒಳಹೋಗಲಾರದು. ಒಮ್ಮೆ ಒಳಕ್ಕೆ ಹೋದರೂ ಬಾಳೆಹಣ್ಣಿನ ತಿರುಳು ಕ್ರಿಮಿನಾಶಕ ಶಕ್ತಿಯನ್ನು ಪಡೆದಿದೆ. ಯಾವುದೇ ಕಾರಣಕ್ಕೂ ಇದನ್ನು ಫ್ರಿಜ್ ನಲ್ಲಿ ಇಡಬಾರದು.
ಉಪಯೋಗ :
+ ಬಾಳೆಹಣ್ಣು ಎ, ಬಿ, ಸಿ ಮತ್ತು ಬಿ 6 ಜೀವಸತ್ವದಿಂದ ಸಮೃದ್ಧವಾಗಿದೆ.
+ ಬಾಳೆಹಣ್ಣಿನಲ್ಲಿ ಡೆಕ್ಸ್ ಟ್ರಿನ್ ಇದೆ. ಇದು ಜೀರ್ಣಶಕ್ತಿಗೆ ನೆರವಾಗುತ್ತದೆ. ದೇಹದ ತೂಕವೂ ಹೆಚ್ಚಾಗುತ್ತದೆ. ಆದ್ದರಿಂದ ಇದು ಉತ್ತಮ ಆಹಾರ.
+ ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಮತ್ತು ಒಂದು ಲೋಟ ಹಾಲು ಸಣ್ಣ ಮಕ್ಕಳ ಒಂದು ದಿನದ ಪರಿಪೂರ್ಣ ಆಹಾರವಾಗುತ್ತದೆ.
+ ಹಾಲು ಮತ್ತು ಜೇನುತುಪ್ಪದೊಡನೆ ಬಾಳೆಹಣ್ಣನ್ನು ಎಳೆಮಕ್ಕಳಿಗೆ ಕೊಡುವುದರಿಂದ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ರಕ್ತ ಪುಷ್ಟಿಯಾಗುತ್ತದೆ.
+ ಎಲುಬು ರೋಗಗಳಿಂದ ನರಳುತ್ತಿರುವ ಮಕ್ಕಳಿಗೆ ಬಾಳೆಹಣ್ಣು ಉತ್ತಮ ಆಹಾರ.
+ ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಬಾಳೆಹಣ್ಣನ್ನು ಸೇವಿಸಿದರೆ ಎದೆನೋವು ಮತ್ತು ಕೆಮ್ಮು ಕಡಿಮೆಯಾಗುತ್ತದೆ. ಆದರೆ ಉಷ್ಣ ಪ್ರಕೃತಿಯವರು ಒಣಕೆಮ್ಮು ಇದ್ದರೆ ಸ್ವಲ್ಪ ಪ್ರಯೋಗಿಸಿ ತಿನ್ನುವುದು ಅನುಕೂಲ. ಏಕೆಂದರೆ ಜೇನುತುಪ್ಪ ಉಷ್ಣಪ್ರೇರಿತವಾದದ್ದು. ಸಕ್ಕರೆಯೂ ಸ್ವಲ್ಪ ಉಷ್ಣವೇ. ಜೋನಿ ಬೆಲ್ಲ ತಂಪು. ಆದರೆ ಅಚ್ಚಿನ ಬೆಲ್ಲ ಉಷ್ಣ.
+ ಊಟದ ನಂತರ ಪ್ರತಿದಿನ ರಾತ್ರಿ ಬಾಳೆಹಣ್ಣನ್ನು ಹಾಲಿನೊಂದಿಗೆ ಸೇವಿಸಿದರೆ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ. ಬಾಳೆಹಣ್ಣಿನಲ್ಲಿ ಗಂಧಕ ಮತ್ತು ಕಬ್ಬಿಣದ ಅಂಶವಿರುವುದರಿಂದ ಬಲವರ್ಧಕವೂ ಮತ್ತು ವೀರ್ಯವರ್ಧಕವೂ ಆಗಿದೆ.
+ ಗರ್ಭಿಣಿಯರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ರಕ್ತಪುಷ್ಟಿ ಹೆಚ್ಚಾಗುತ್ತದೆ. ಅಲ್ಲದೆ ಹೆರಿಗೆಯೂ ಬಹುಸುಲಭವಾಗಿ ಆಗುತ್ತದೆ.
+ ಪ್ರತಿದಿನವೂ ಕ್ರಮವಾಗಿ ಬಾಳೆಹಣ್ಣನ್ನು ತಿನ್ನುವುದರಿಂದ ಮೈಯಲ್ಲಿನ ಮಾಂಸ ವೃದ್ಧಿಯಾಗುತ್ತದೆ. ಹೀಗೆ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಇದರಲ್ಲಿರುವ ನಾರಿನ ಅಂಶವು ಮಲಬದ್ಧತೆಯ ನಿವಾರಣೆಗೆ ಸಹಕಾರಿ.
+ ಬಾಳೆಹಣ್ಣಿನ ತಿರುಳನ್ನು ಹಸುವಿನ ಹಾಲಿನಲ್ಲಿ ಚೆನ್ನಾಗಿ ಅರೆದು [ಮೆದ್ದು] ಅದಕ್ಕೆ ಬಾಳೆಹೂವಿನ ರಸ ಸೇರಿಸಿ ಸುಮಾರು ಐವತ್ತು ದಿನಗಳ ಕಾಲ ಪ್ರತಿದಿನ ಒಂದು ಚಮಚ ಸೇವಿಸಿದರೆ ಶರೀರದ ತೂಕ ಇಳಿಯುತ್ತದೆ. ಸ್ಥೂಲಕಾಯರು ತೆಳ್ಳಗಾಗುತ್ತಾರೆ.
+ ಬಾಳೆಹಣ್ಣನ್ನು ಮೊಸರಿನಲ್ಲಿ ಕಿವಿಚಿಕೊಂಡು ತಿಂದರೆ ಕಣ್ಣು ಉರಿ, ಅಂಗಾಲು ಉರಿ ಶಾಂತವಾಗುವುದು.ಮತ್ತು ಮಲಬದ್ಧತೆಯು ನಿವಾರಣೆಯಾಗುವುದು. ಕರುಳಿನ ತೊಂದರೆಗಳು ನಿವಾರಣೆಯಾಗುತ್ತವೆ.
+ ಗಾಂಜಾ, ಆಫೀಮು ಸೇವಿಸಿ ಉಂಟಾಗಿರುವ ಹಾನಿಯನ್ನು ನಿವಾರಿಸಲು ಬಾಳೆದಿಂಡಿನ ರಸವನ್ನು ಸೇವಿಸಬೇಕು. [ ಬಂಗೀಪಾನಕದ ಅಮಲನ್ನು ಇಳಿಸಲು ಇದು ಅನುಕೂಲ ]
+ ಬಾಳೆ ಎಳೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಭಿಕ್ಕಳಿಕೆ ದೂರವಾಗುತ್ತದೆ.
+ ಮೈನೆರೆದ ಹುಡುಗಿಯರಲ್ಲಿ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ಬಾಳೆಹೂವಿನ ರಸವನ್ನು ಮೊಸರಿನಲ್ಲಿ ಕೊಡುವುದರಿಂದ ಬಹುಬೇಗ ಗುಣವಾಗುತ್ತದೆ.
+ ಬಾಳೆಕಾಯಿಯನ್ನು ಬಿಸಿಬೂದಿಯಲ್ಲಿ ಸುಟ್ಟು ತಿನ್ನುವುದರಿಂದ ರಕ್ತಭೇದಿ ತಕ್ಷಣ ನಿಲ್ಲುತ್ತದೆ
+ ಉಪವಾಸವಿದ್ದು ದೇಹವು ದಣಿದಿದ್ದರೆ ಒಂದು ಬಾಳೆಹಣ್ಣು ತಿಂದರೆ ಸಾಕು. ಅದರಲ್ಲಿರುವ ಗ್ಲೂಕೋಸ್, ಸಕ್ಕರೆ ಅಂಶವು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
+ ಅನಿಮೀಯಾದಿಂದ ನರಳುತ್ತಿರುವವರಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗುವಂತೆ ಮತ್ತು ಬೆಳಗ್ಯಿನ ಸುಸ್ತನ್ನು ಕಡಿಮೆ ಮಾಡಲು ಇದು ಸಹಕಾರಿ.
+ ಮಾನಸಿಕ ಒತ್ತಡದಿಂದ ನರಳುತ್ತಿದ್ದರೂ ಸಹ ಬಾಳೆಹಣ್ಣನ್ನು ತಿನ್ನುವುದರಿಂದ ನಮ್ಮ ಮನಸ್ಸಿಗೆ ರಿಲ್ಯಾಕ್ಸ್ ದೊರೆಯುತ್ತದೆ. ಬಾಳೆಹಣ್ಣಿನಲ್ಲಿರುವ ಬಿ 6 ಜೀವಸತ್ವವು ನಮ್ಮ ಮನಸ್ಸು ಉಲ್ಲಾಸದಿಂದ ಇರುವಂತೆ ಮಾಡುತ್ತದೆ.
+ ಸೊಳ್ಳೆ ಕಚ್ಚಿದ ಭಾಗಕ್ಕೆ ಬಾಳೆಹಣ್ಣನ್ನು ಉಜ್ಜಿದರೆ ನವೆ ಮತ್ತು ಉರಿ ಕಡಿಮೆಯಾಗುತ್ತದೆ.
ತಾರೀಖು : 29 - 10 - 2014
ಮಾಹಿತಿಯ ಕೃಪೆ : ನುರಿತ ನಾಟಿ ವೈದ್ಯರು.

No comments:

Post a Comment

Note: only a member of this blog may post a comment.