Monday 14 August 2017

## ಆಗಸ್ಟ್ ಹದಿನೈದರ ಸ್ವಾತಂತ್ರ್ಯ ಏನು, ಎತ್ತ ? ##


                                                                                        ~~~~~ ಎಂ. ಗಣಪತಿ. ಕಾನುಗೋಡು.


ಆಗಸ್ಟ್ ಹದಿನೈದರ ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವಾತಂತ್ರ್ಯವಷ್ಟೆ. ಪರಕೀಯರ ಆಡಳಿತದಿಂದ ಮುಕ್ತವಾಗಿ ಸ್ವದೇಶಿಯರ ಆಡಳಿತಕ್ಕೆ ನಾಂದಿ ಹಾಡಿದ ಒಂದು ಮಹತ್ಕಾರ್ಯ. ಈ ರಾಜಕೀಯ ಸ್ವಾತಂತ್ರ್ಯವನ್ನು ಸಾಕಾರಗೊಳಿಸಲು ಭಾರತೀಯರ ಬದುಕಿನ ಎಲ್ಲ ಮಜಲುಗಳು ಆಯಾ ಕ್ಷೇತ್ರದಲ್ಲಿ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕು. ನಮಗೆ ರಾಜಕೀಯ ಸ್ವಾತಂತ್ರ್ಯ ಬಂದು 60 ವರುಷಗಳಲ್ಲಿ ಅವು ಇನ್ನೂ ಸಾಧನೆಯಾಗಿಲ್ಲ.

ನಮ್ಮ ದೇಶದಲ್ಲಿ ರಾಜಕೀಯ ಸ್ವಾತಂತ್ರ ಬಂದು ಮೂರು ವರುಷಗಳಲ್ಲಿ ಅಂದರೆ 1950 ರಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಆಯಿತು. ವ್ಯಕ್ತಿಯೊಬ್ಬ ಪ್ರಭುವಾಗಬೇಕಿದ್ದರೆ, ವ್ಯಕ್ತಿಗಳ ಸಮೂಹ ಪ್ರಭುತ್ವವನ್ನು ಸಾಧಿಸಬೇಕೆಂದಿದ್ದರೆ ಅಲ್ಲಿ ಒಳಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಮತ್ತು ವ್ಯಕ್ತಿಗಳ ಸಮೂಹವು ತನ್ನ ಬದುಕಿನ ಎಲ್ಲ ಆಯಾಮಗಳಲ್ಲಿ ಸ್ವಾಯತ್ತತೆ ಮತ್ತು ಪೂರ್ಣತೆ -- ಒಮ್ಮೆ ಪರಿಪೂರ್ಣತೆ ಆಗದಿದ್ದರೂ ಕೂಡಾ -- ಯನ್ನು ಹೊಂದಬೇಕು. ಆಗ ಮಾತ್ರ ಅವರಿಗೆ ಸ್ವಾತಂತ್ರವನ್ನು ಅನುಭವಿಸುವ ಯೋಗ್ಯತೆ ಬರುತ್ತದೆ. ಆರ್ಥಿಕ ಸ್ವಾಯತ್ತತೆಯನ್ನು ಹೊಂದದ ಮತದಾರ ಇಂದು ಚುನಾವಣೆಯಲ್ಲಿ ಒಂದು ನೂರು ರುಪಾಯಿಗೂ ಚುನಾವಣೆಗೆ ಸ್ಪರ್ಧಿಸಿದವನ ಎದುರು ಕೈ ಚಾಚುತ್ತಿದ್ದಾನೆ. ಆಗ ಯೋಗ್ಯತೆ ಇದ್ದವನನ್ನು ಚುನಾಯಿಸುವ ಸಂದರ್ಭವೆಲ್ಲಿ ಬಂತು ?. ಇದು ಒಂದು ಉದಾಹರಣೆ ಅಷ್ಟೆ. ಹೀಗೆ ಸ್ವತಂತ್ರ ಭಾರತದ ಪ್ರಜಾಪ್ರಭುಗಳೆನ್ನಿಸಿಕೊಂಡವರ ಬದುಕಿನ ಪ್ರತಿಯೊಂದು ಆಯಾಮದ ಗತಿಯೂ ಇಷ್ಟೇ. ನಾವು ಎಲ್ಲಿಯವರೆಗೆ ಯೋಗ್ಯತೆಯನ್ನು ಗಳಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ದಾಷ್ಟ್ಯರ ದಾಸರಾಗಿಯೇ ಉಳಿಯಬೇಕು. ಅಂದು ಪರಕೀಯರ ದಾಸರಾಗಿ. ಇಂದು ಸ್ವದೇಶಿಯರ ದಾಸರಾಗಿ. ಅಷ್ಟೆ.

ತಾರೀಖು 14 - 8 - 2017

No comments:

Post a Comment

Note: only a member of this blog may post a comment.