ಹಳ್ಳಿಯ ಊರಿನ ಒಂದು ಕಾಲು ದಾರಿಯಲ್ಲಿ ರಾತ್ರಿ ಒಬ್ಬ ದಡ್ಡ ನಡೆದುಕೊಂಡು ಹೋಗುತ್ತಿದ್ದ. ಅವನ ಕಾಲಿಗೆ ಏನೂ ಮೆತ್ತನ ವಸ್ತು ತಾಗಿದಂತಾಯಿತು. ಅದು ಏನೋ , ಯಂತದೋ ಎಂದು ರಸ್ತೆಗೆ ಅಂಗಾಲಿನಿಂದ ವರೆಸಿ ಮುಂದೆ ಹೊರಟು ಹೋದ. ಸ್ವಲ್ಪ ಹೊತ್ತು ತಡೆದು ಅದೇ ದಾರಿಯಲ್ಲಿ ಬುದ್ಧಿವಂತನೊಬ್ಬ ನಡೆದು ಬಂದ. ಅವನ ಕಾಲಿಗೂ ಅದು ಸ್ವಲ್ಪ ತಾಗಿತು. ಅರರೆ ಇದು ಏನಿರಬಹುದೆಂದು ಅಂಗಾಲಿನಲ್ಲಿಯೇ ಆಚೀಚೆ ನೆಲಕ್ಕೆ ತೀಡಿ ನೋಡಿದ. ಅಂಗಾಲಿಗೆಲ್ಲಾ ತಣ್ಣಗೆ ಆಯಿತೇ ವಿನಃ ಅದು ಏನೆಂದು ತಿಳಿಯಲಿಲ್ಲ. ಆಗ ಕೈಗೆ ಒರೆಸಿಕೊಂಡು ಬೆರಳುಗಳಿಂದ ತಿಕ್ಕಿ ನೋಡಿದ. ಆಗಲೂ ಹೊಳೆಯಲಿಲ್ಲ. ಆಗ ನೋಡಿಯೇ ಬಿಡೋಣವೆಂದು ಮೂಸಿ ನೋಡಿದ. ಅದು ಮೂಗಿಗೂ ಸಾಕಷ್ಟು ತಾಗಿತು. ಕೊನೆಗೆ ನೋಡಿದರೆ ಥೂ, ಪೂ, ಅದು ಪಾಯಖಾನೆ, ಯಾರೋ ನಡುದಾರಿಯಲ್ಲಿ ರಸ್ತೆಯಲ್ಲಿ ಹೇತು ಹೋಗಿದ್ದರು.
ನೀತಿ : ಹೆಚ್ಚು ವಿಚಾರಿಸದೆ ಮುಂದೆ ನಡೆದ ದಡ್ಡನಿಗೆ ಒಂದೇ ಕಡೆ ಸ್ವಲ್ಪ ಹೊಲಸಾಯಿತು. ಬಹಳ ವಿಚಾರ ಮಾಡಲು ಹೊರಟ ಬುದ್ಧಿವಂತನಿಗೆ -- ಕಾಲು, ಕೈ ಮತ್ತು ಮೂಗು -- ಹೀಗೆ ಮೂರು ಕಡೆ ಬಹಳ ಹೊಲಸಾಯಿತು.
31/Augus/2017
No comments:
Post a Comment
Note: only a member of this blog may post a comment.