Monday 2 October 2017

#### ಭಾನು -- ಭೂಮಿ ####


ಎಲ್ಲಿಯ ಭಾನು ಎಲ್ಲಿಯ ಭೂಮಿ
ದಿಗಿಲು ತಂದಿದೆ ದಿಗಂತದ ಬೆಳಕು.
ಸಮುದ್ರವಸನೆಯತ್ತ ರವಿ ಕಿರಣ 
ರಜನಿಗದೋ ಚಿನ್ನದ ತಿಲಕ
ದಿನಕರನ ನೇರ ನೋಟದ ಭಾಸ.
ನೀರಿನುದ್ದಕೂ ಮಿನುಗುವ ಸೆರಗು
ಪರಿ ಸಾರುತಿದೆ ದಾರಿ ದೀಪದಂತೆ.
ತಂಪಿನ ಜಲಕೆ ಬೆಳ್ಳಿಯ ಪ್ರಭಾವಳಿ.
.............................................
ಚಿತ್ತಾರ ಸಾರುತಿದೆ ನೀತಿಯೊಂದ.
ನೀರ ತಟದಲಿನ ಮರವಿಂಗಿಸಿ ದಾಹವ
ಸೊಂಪಿನ ಸಕಲ ಸಮೃದ್ಧಿಯ ನಡುವೆ.
ಬತ್ತಿ ಕಾಷ್ಟವಾದುದು ಫಲ ಬಿಡದೆ ಬರೆ.
ಏಕೋ ಒಣಗಿ ಬರಡಾದುದು ಸೊರಗಿ.
ವಿಧಿ ಬಿಡಲಿಲ್ಲ ಅದು ಪಡೆದ ಪಾಡು.
~~~~~~~~~~~~~~~~~~~~~
ಎಂ ಗಣಪತಿ ಕಾನುಗೋಡು

Photography by : Sharada Hegde
Image may contain: twilight, sky, outdoor and nature

No comments:

Post a Comment

Note: only a member of this blog may post a comment.