ಮೇರು ಪರ್ವತದಲ್ಲಿ ಕೇಸರಿ ಎನ್ನುವ ವಾನರ ರಾಜ ಮತ್ತು ಆತನ ಹೆಂಡತಿ ಅಂಜನೆಗೆ ಮಗನಾಗಿ ಹುಟ್ಟಿದವ ಹನುಮಂತ. ಮಕ್ಕಳಾಗದಿದ್ದಾಗ ಅವರು ತಮ್ಮ ಕುಲದೇವರಾದ ವಾಯುದೇವರನ್ನು ಕುರಿತು ಪ್ರಾರ್ಥಿಸಿ ವಾಯುವಿನ ಅನುಗ್ರಹದಿಂದ ಹನುಮಂತನನ್ನು ಪಡೆದರು. ಕೇಸರಿಯ ಮಗನಾದ್ದರಿಂದ ಕೆಸರಿನಂದನ, ಅಂಜನೆಯ ಮಗನಾದ್ದರಿಂದ ಆಂಜನೇಯ, ವಾಯುವಿಗೆ ಮರುತ್ ಎನ್ನುವ ಹೆಸರಿರುವುದರಿಂದ ಮಾರುತಿ ಎನ್ನುವ ಹೆಸರುಗಳು ಬಂತು.
ಹನುಮಂತ ಬಂಟನಾಗಿಲ್ಲ. ಆತ ರಾಜನ -- ವಾನರ ರಾಜನ -- ಮಗ. ಹನುಮಂತ ಸುಗ್ರೀವನ ಮಂತ್ರಿಯೂ ಹೌದು. ಆದ್ದರಿಂದ ಆತ ಬಂಟನಲ್ಲ. ರಾಮನು ಯಾರೆಂದು ಪರೀಕ್ಷಿಸಲು, ತಿಳಿದುಕೊಳ್ಳಲು ಸುಗ್ರೀವನ ಆದೇಶದ ಮೇರೆಗೆ ಹನುಮಂತ ರಾಮನ ಹತ್ತಿರ ಬಂದಿದ್ದ. ವಟುವಿನ ವೇಷ ಧರಿಸಿ ರಾಮನ ಬಳಿ ಹೋದಾಗ ರಾಮನ ತೇಜಸ್ಸು, ಮಾತು, ಗಾಂಭೀರ್ಯ ಎಲ್ಲವನ್ನು ನೋಡಿ ಹನುಮಂತ ಮರುಳಾಗಿಬಿಟ್ಟ. ಹೀಗಾಗಿ ರಾಮನ ಬಾಲಿ ಇರಲು ಇಚ್ಛಿಸಿದರಾಮನೇ ಹೇಳುತ್ತಾನೆ ' ಹನುಮಂತ ತನ್ನ ಮಿತ್ರ, ಆತ ಮಾಡಿದ ಸಹಾಯವನ್ನು ತೀರಿಸಲಿಕ್ಕಾಗುವುದಿಲ್ಲ, ನಾನು ಅವನಿಗೆ ಋಣಿ ' ಎಂದಿದ್ದಾನೆ. ಆದರೆ ಹನುಮಂತನೇ ತಾನು ರಾಮನ ದಾಸ ಎಂದುಕೊಳ್ಳುತ್ತಾನೆ. ಆದ್ದರಿಂದ ಹನುಮಂತ ಬಂಟನಲ್ಲ. ಸ್ವಇಚ್ಹೆಯಿಂದ ರಾಮನ ಆಪ್ತ ತಾನು ಎಂದು ಹೇಳಿಕೊಳ್ಳುತ್ತಾನೆ.
~~~~ ಸತ್ಯದರ್ಶನ ಖ್ಯಾತಿಯ ಡಾ.ಪಾವಗಡ ಪ್ರಕಾಶರಾವ್ [ ಸತ್ಯಪ್ರಕಾಶ -- 2 ].
-ಎಂ ಗಣಪತಿ , ಕಾನುಗೋಡು
No comments:
Post a Comment
Note: only a member of this blog may post a comment.