Tuesday 18 August 2020

## ದಕ್ಷಿಣಾದಾನ ##


ಯಾವ ವಸ್ತುವನ್ನು ಕೊಡುವುದರಿಂದ ಯಜಮಾನನು ಅಭಿವೃದ್ಧಿಗೊಳ್ಳುತ್ತಾನೆಯೋ ಆ ವಸ್ತುವಿಗೆ ದಕ್ಷಿಣಾ ಎಂದು ಹೆಸರು. ವೃದ್ಧ್ಯರ್ಥದ 'ದಕ್ಷ' ಧಾತುವಿನ ಮೇಲೆ 'ಇನನ್' ಪ್ರತ್ಯಯವು ಬಂದು "ದಕ್ಷಿಣಾ" ಎಂಬ ಶಬ್ದವು ಉತ್ಪನ್ನವಾಗಿರುತ್ತದೆ.

ಯಜಮಾನನು ತನ್ನ ಯೋಗ್ಯತೆಗೆ ಅನುಸರಿಸಿ ಸರಿಯಾದ ರೀತಿಯಲ್ಲಿ, ಕೊಡಬೇಕಾದ ಕಾಲದಲ್ಲಿ ಸತ್ಪಾತ್ರರಿಗೆ ಕೊಟ್ಟುದುದು ಮಾತ್ರವೇ ದಕ್ಷಿಣೆಯಾಗುತ್ತದೆ. ಇಂಥಹ ದಾನವು ಮಾತ್ರ ಅನಂತವಾದ ಫಲವನ್ನು ಕೊಡುತ್ತದೆ. ಇಲ್ಲದಿದ್ದರೆ 'ಅಭಿವೃದ್ಧಿಗೊಳಿಸುವುದು' ದಕ್ಷಿಣಾ ಶಬ್ದದ ಅರ್ಥವು ಅನ್ವರ್ಥವಾಗುವುದಿಲ್ಲ.

ಗ್ರಂಥಋಣ : ಸಂಸ್ಕಾರ ಮಹೋದಧಿ -- ಡಾ | ಎ. ಅನಂತನರಸಿಂಹಾಚಾರ್ಯ.

No comments:

Post a Comment

Note: only a member of this blog may post a comment.