ವಿಶ್ವಾಮಿತ್ರ ಚಂದ್ರವಂಶದ ಕುಶಿಕ ವಂಶದವನಾದ ಗಾಧಿರಾಜನ ಮಗ . ಕುಶಿಕ ವಂಶದವನಾದ್ದರಿಂದ ಕೌಶಿಕ ಎಂದೂ ಇವನನ್ನು ಕರೆದದ್ದುಂಟು. ಆದರೆ ಅದು ಅವನ ಮೂಲ ಹೆಸರಲ್ಲ. ಆತ ಮೂಲತಃ ಒಬ್ಬ ಕ್ಷತ್ರಿಯನಾಗಿ ಅರಸನಾಗಿದ್ದ.. ಆಗ ಅವನ ಹೆಸರು ' ವಿಶ್ವರಥ ' ಎಂದಾಗಿತ್ತು. ಮೊದಲು ಕ್ಷತ್ರಿಯನಾಗಿ ಜನಿಸಿ ಕೊನೆಗೆ ತನ್ನ ತಪೋಮಹಿಮೆಯಿಂದ ಬ್ರಾಹ್ಮಣನಾದ. ಅದಕ್ಕೆ ಒಂದು ಕಾರಣವಿದೆ. ಆತ ಕ್ಷತ್ರಿಯನಾಗಿದ್ದಾಗ ಜಗತ್ತಿನ ರಾಜಮಹಾರಾಜರುಗಳನ್ನೆಲ್ಲಾ ಜಯಿಸಿ ರಾಜಧಾನಿಗೆ ಮರಳುತ್ತಿದ್ದಾಗ ದಾರಿಯಲ್ಲಿದ್ದ ವಸಿಷ್ಟನ ಆಶ್ರಮದಲ್ಲಿ ಮಧ್ಯಾಹ್ನದ ಹೊತ್ತಿಗೆ ಸೈನ್ಯಸಮೇತ ತಂಗುತ್ತಾನೆ. ಅಲ್ಲಿದ್ದ ನಂದಿನೀಧೇನುವನ್ನು ಮೆಚ್ಚಿ ಬಲಾತ್ಕಾರದಿಂದ ಸೆಳೆದೊಯ್ಯುತ್ತಿದ್ದಾಗ ವಸಿಷ್ಟನಿಂದ ಪರಾಜಿತನಾಗುತ್ತಾನೆ. ಈ ರೀತಿ ಪರಾಜಿತನಾದವನು ತಾನೂ ಬ್ರಾಹ್ಮಣನಾಗಬೇಕೆಂದು ತಪಸ್ಸು ಮಾಡಿ ಬ್ರಾಹ್ಮಣನಾಗುತ್ತಾನೆ.
No comments:
Post a Comment
Note: only a member of this blog may post a comment.